Wednesday, May 15, 2024
spot_imgspot_img
spot_imgspot_img

ಸುಳ್ಯ: ಅಕ್ರಮ ಮರಳು‌ ಸಾಗಾಟ; ಚಾಲಕ ಪರಾರಿ, ಲಾರಿ ಪೊಲೀಸ್ ವಶ..!

- Advertisement -G L Acharya panikkar
- Advertisement -

ಸುಳ್ಯ: ಮರಳು‌ ಸಾಗಾಟಕ್ಕೆ ಸಂಬಂಧಿಸಿ ಟಿಪ್ಪರ್‌‌ ಲಾರಿಯನ್ನು‌ ತಪಾಸಣೆಗಾಗಿ ಸುಳ್ಯ ಪೊಲೀಸ್‌‌ ಠಾಣಾ ಪೊಲೀಸ್‌‌‌ ಉಪ ನಿರೀಕ್ಷಕರು(ತನಿಖೆ) ಸರಸ್ವತಿ ಬಿ ಟಿಬರವರು ಠಾಣಾ ಸಿಬ್ಬಂದಿಗಳೊಂದಿಗೆ ತಡೆದಿರುವ ಘಡನೆ ಸುಳ್ಯ ಅರಂತೋಡು ಜಂಕ್ಷನ್‌‌ ಎಂಬಲ್ಲಿ ನಡೆದಿದೆ.

ಸುಳ್ಯ ಅರಂತೋಡು ಜಂಕ್ಷನ್‌‌ ಎಂಬಲ್ಲಿ, ತೆರಳುತ್ತಿದ್ದ ಟಿಪ್ಪರ್‌‌ ಲಾರಿಯನ್ನು‌ ತಪಾಸಣೆಗಾಗಿ, ಸುಳ್ಯ ಪೊಲೀಸ್‌‌ ಠಾಣಾ ಪೊಲೀಸ್‌‌‌ ಉಪ ನಿರೀಕ್ಷಕರು (ತನಿಖೆ) ಸರಸ್ವತಿ ಬಿ ಟಿಬರವರು ಠಾಣಾ ಸಿಬ್ಬಂದಿಗಳೊಂದಿಗೆ ತಡೆದಿದ್ದು, ಈ ವೇಳೆ ಟಿಪ್ಪರ್‌‌ ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿರುತ್ತಾನೆ.

ಬಳಿಕ ಟಿಪ್ಪರ್‌‌ ಲಾರಿಯನ್ನು ಪರಿಶೀಲಿಸಿದಾಗ, ಲಾರಿಯಲ್ಲಿ ಸುಮಾರು ಸುಮಾರು 5 ಸಾವಿರ ಮೌಲ್ಯದ 3 ಮೆಟ್ರಿಕ್‌‌ ಟನ್‌‌ ತೂಕದ ಮರಳು ಲೋಡ್ ಮಾಡಿರುವುದು ಕಂಡುಬಂದಿರುತ್ತದೆ. ಲಾರಿಯಲ್ಲಿ ಮರಳು‌ ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಕಂಡುಬಾರದ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿಯನ್ನು ವಶಕ್ಕೆ ಪಡೆದು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 41/2024 ಕಲಂ: 379 IPC ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ.

- Advertisement -

Related news

error: Content is protected !!