Friday, April 26, 2024
spot_imgspot_img
spot_imgspot_img

ಸುಳ್ಯ: ಮತ್ತೊಮ್ಮೆ ಕಾರ್ಣಿಕ ಮೆರೆದ ಕೊರಗಜ್ಜ; ನಾಪತ್ತೆಯಾಗಿದ್ದ ಬಾಲಕಿ ಎರಡೇ ದಿನಗಳಲ್ಲಿ ಪತ್ತೆ

- Advertisement -G L Acharya panikkar
- Advertisement -

ಸುಳ್ಯ : ತುಳುನಾಡಿನಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ ಸಾಬೀತಾಗಿದೆ. ನಾಲ್ಕೂರು ಗ್ರಾಮದ ಉಜಿರಡ್ಕದಲ್ಲಿ ಕೊರಗಜ್ಜನ ಸಾನಿಧ್ಯದಲ್ಲಿ ಅಚ್ಚರಿಯೊಂದು ನಡೆದಿದೆ.

ಬೆಂಗಳೂರಿನಿಂದ ಅ.17ರಂದು ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ ಕೊರಗಜ್ಜ ದೈವ ಸಾನಿಧ್ಯದಲ್ಲಿ ಬೇಡಿಕೆ ಸಲ್ಲಿಸಿದ್ದು ದೈವದ ನುಡಿಯಂತೆ ಬಾಲಕಿ ಎರಡೇ ದಿನದಲ್ಲಿ ಪತ್ತೆಯಾಗಿದ್ದಳು. ಈ ಹಿನ್ನೆಲೆ ಆದಿತ್ಯ ವಾರ ಬಾಲಕಿ ಸಮೇತ ಕುಟುಂಬಸ್ಥರು ಸಾನಿಧ್ಯಕ್ಕೆ ಬಂದು ಕೊರಗಜ್ಜನ ದರ್ಶನ ಪಡೆದರು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬಾಲಕಿ ಭಾರ್ಗವಿ ಮನೆಯವರು ಕಡಿಮೆ ಅಂಕ ತೆಗೆದುಕೊಂಡ ಕಾರಣ ಬೈದಿದ್ದು, ಮನನೊಂದು ಬಾಲಕಿ ಬೆಂಗಳೂರಿನಿಂದ ಬಂದು ಮಂಗಳೂರಿನಿಂದ ನಾಪತ್ತೆಯಾಗಿದ್ದಳು. ಆಕೆಯ ಪತ್ತೆಗಾಗಿ ಯುವ ತೇಜಸ್ಸು ಟ್ರಸ್ಟ್ ಕಾರ್ಯಕರ್ತನಾದ ನಿತಿನ್ ಭಟ್ ನೂಚಿಲ ಅವರ ಮನೆಯವರು ಅ.19ರಂದು ಪ್ರಾರ್ಥನೆ ಸಲ್ಲಿಸಿದ್ದರು.

ಇಟ್ಟ ಹರಕೆಯಂತೆ ಬಾಲಕಿ ಗೋವಾದಲ್ಲಿ ಪತ್ತೆಯಾಗಿದ್ದಳು. ಈ ಹಿನ್ನೆಲೆ ಭಾನುವಾರ ಆಕೆಯ ಕುಟುಂಬಸ್ಥರು ಸುಳ್ಯಕ್ಕೆ ಬಂದು ಕೊರಗಜ್ಜನ ದರ್ಶನ ಪಡೆದರು.

vtv vitla
- Advertisement -

Related news

error: Content is protected !!