- Advertisement -
- Advertisement -
ಉಡುಪಿ: ಗಾರೆ ಕೆಲಸದ ಮೇಸ್ತ್ರಿಯೊಬ್ಬರು ನೆರೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದು ಮೈದಾನ ಸಮೀಪದ ತಂತ್ರಿ ಮನೆಯ ರಸ್ತೆಯಲ್ಲಿ ನಡೆದಿದೆ.
ಶವವನ್ನು ಅಗ್ನಿಶಾಮಕ ದಳದವರ ಸಹಕಾರದಿಂದ ಮೇಲಕ್ಕೆತ್ತಲಾಯಿತು. ಮೃತ ವ್ಯಕ್ತಿಯನ್ನು ಸದಾನಂದ ಪೂಜಾರಿ (45 ) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶವವನ್ನು ವೈದ್ಯಕೀಯ ಪರೀಕ್ಷೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕರಿಸಿದರು.
- Advertisement -