- Advertisement -
- Advertisement -
ಉಳ್ಳಾಲ : ಮರದಿಂದ ಬಿದ್ದು ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿಯ ಬೀಚ್ ರಸ್ತೆಯಲ್ಲಿ ನಡೆದಿದೆ.
ಉಳ್ಳಾಲ ಮೊಗವೀರ ಪಟ್ಣ ನಿವಾಸಿ ನಿತಿನ್ ಸುವರ್ಣ(37) ಮೃತಪಟ್ಟ ವ್ಯಕ್ತಿ. ವಿವಾಹಿತರಾಗಿರುವ ನಿತಿನ್ ಅವರು ಸಂಜೆ ಅಬ್ಬಕ್ಕ ವೃತ್ತದ ಬೀಚ್ ರಸ್ತೆ ಬದಿಯಲ್ಲಿರುವ ಮಾವಿನ ಮರ ಏರಿ ಹಣ್ಣು ಕೀಳುತ್ತಿದ್ದರು. ಈ ವೇಳೆ ಆಯತಪ್ಪಿ ನಿತಿನ್ ಕೆಳಗೆ ಬಿದ್ದಿದ್ದು ತಲೆಗೆ ಕಲ್ಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳೀಯರು ತಕ್ಷಣ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ನಿತಿನ್ ಸಾವನ್ನಪ್ಪಿದ್ದರು. ಮೃತ ನಿತಿನ್ ಜಪ್ಪಿನ ಮೊಗರುವಿನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು.
- Advertisement -