- Advertisement -
- Advertisement -
ವಿಟ್ಲ: ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್ನ ವತಿಯಿಂದ `ಶ್ರದ್ಧಾಕೇಂದ್ರಗಳಲ್ಲಿ ವನಮಹೋತ್ಸವ’ ಕಾರ್ಯಕ್ರಮದ ಪ್ರಯಕ್ತ ಗಿಡಗಳನ್ನು ನೆಡುವ ಕಾರ್ಯಕ್ರಮ ಮಾಣಿಲ ಶ್ರೀಧಾಮದಲ್ಲಿ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಲಯನ್ ಪ್ರಾಂತೀಯ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಸದಸ್ಯರುಗಳಾದ ದೇವಿಪ್ರಸಾದ್ ಶೆಟ್ಟಿ, ರವಿಶಂಕರ್, ಪ್ರಭಾಕರ ಶೆಟ್ಟಿ, ಸುದೇಶ್ ಭಂಡಾರಿ ಮತ್ತು ಮಾಲತಿ ಕೆ ಹಾಗೂ ಲಿಯೋ ಕ್ಲಬ್ ಅಧ್ಯಕ್ಷೆ ಯುಕ್ತಾ ಭಾಗವಹಿಸಿದ್ದರು.
- Advertisement -