- Advertisement -
- Advertisement -
ವಿಟ್ಲ: ವೀರಕಂಬ ಗ್ರಾಮದ ಕೊಟ್ಟಾರಿ ಕಟ್ಟೆ ಬಸ್ಸು ನಿಲ್ದಾಣದ ಬಳಿ ದುಷ್ಕರ್ಮಿಗಳು ದನದ ಕತ್ತರಿಸಿದ ಕಿವಿ ಮತ್ತು ಚರ್ಮ ಎಸೆದಿದ್ದು ಈ ಕೃತ್ಯವನ್ನು ಹಿಂ.ಜಾ.ವೇ.ವಿಟ್ಲ ತಾಲೂಕು ಮತ್ತು ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ತೀವ್ರವಾಗಿ ಖಂಡಿಸಿದೆ.
ಈ ಭಾಗದಲ್ಲಿ ಹಿಂದೆಯೂ ಇಂತಹ ಘಟನೆಗಳನ್ನು ನಡೆಸಿ ಕೋಮು ಪ್ರಚೋದಿಸುವ ಕೆಲಸ ನಡೆದಿದ್ದು, ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಹಿಂ.ಜಾ.ವೇ.ವಿಟ್ಲ ತಾಲೂಕು ಮತ್ತು ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ಪೋಲಿಸ್ ಇಲಾಖೆಯ ಜೊತೆ ಮಾತುಕತೆ ನಡೆಸಿ ಸಮಗ್ರ ತನಿಖೆ ಮಾಡುವಂತೆ ಅಗ್ರಹಿಸಿದೆ.
ಹಿಂದೂಗಳ ಪವಿತ್ರ ಹಬ್ಬವಾದ ದಸರಾ,ನವರಾತ್ರಿ ಸಂದರ್ಭದಲ್ಲಿ ಕಿಡಿಗೇಡಿಗಳು ಈ ರೀತಿ ಮಾಡಿರುವುದು ಖಂಡನೀಯ. ಇದು ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಇದರ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವಿಟ್ಲ ಪ್ರಖಂಡ ಆಗ್ರಹಿಸಿದೆ.
- Advertisement -