- Advertisement -
- Advertisement -
ವಿಟ್ಲ: ’ಕಲಾತಪಸ್ವಿ’ ಸಾಂಸ್ಕೃತಿಕ ತಂಡ ಇದರ ಪ್ರಥಮ ವರ್ಷದ ಸಂಭ್ರಮಾಚರಣೆಯು ಕಂಬಳಬೆಟ್ಟು ಸಮಾಜ ಮಂದಿರ ಧರ್ಮನಗರದಲ್ಲಿ ಜೂ.18ರಂದು ನಡೆಯಲಿದೆ.
18-6-2023, ಅಪರಾಹ್ನ ಗಂಟೆ 2 ಕ್ಕೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಅಪರಾಹ್ನ ಗಂಟೆ 2.15ಕ್ಕೆ ನಡೆಯುವ ಸಭಾಕಾರ್ಯಕ್ರಮದಲ್ಲಿ ನಮಿತಾ ತಾರನಾಥ ಬೊಳಿಗದ್ದೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಠಲ ಪ.ಪೂ.ಕಾಲೇಜಿನ ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ, ಝೀ ಕನ್ನಡ ’ಕಾಮಿಡಿ ಕಿಲಾಡಿ’ ಕಲಾವಿದ ಅನೀಶ್ ಪೂಜಾರಿ ವೇಣೂರು, ರಂಗಭೂಮಿ ಕಲಾವಿದ ಮನೀಶ್ ಶೆಟ್ಟಿ ಸಿದ್ದಕಟ್ಟೆ, ಹಾಡುಗಾರ ಮತ್ತು ಕಾರ್ಯಕ್ರಮ ನಿರೂಪಕರಾದ ಸಂತೋಷ್ ಬೆಂಕ್ಯ, ರಕ್ಷಣ್ ಮಡೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಳಿಕ ಗಂಟೆ 2.45ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕಲಾಯಶಸ್ವಿ ಸೀಸನ್-2 ಆನ್ಲೈನ್-ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ಲಕ್ಕಿಡಿಪ್ ಅದೃಷ್ಟವಂತರ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -