ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಇದರ ವತಿಯಿಂದ 52ನೇ ವರ್ಷದ ವಿಟ್ಲ ದಸರಾ 2023 ಸೆ. 20 ರಿಂದ 24ರ ವರೆಗೆ ವಿಟ್ಲದ ಶ್ರೀಮತ್ ಅನಂತೇಶ್ವರ ದೇವಸ್ಥಾನದ ’ಅನಂತ ಸದನ’ ದಲ್ಲಿ ವಿಜೃಂಭಣೆಯಿಂದ ನಡೆಯಿತು.
ದಿನಾಂಕ 24-10-2023ನೇ ಮಂಗಳವಾರ ವಿಜಯದಶಮಿ ಪೂವಾಹ್ನ ಪ್ರಸನ್ನ ಪೂಜೆ, ಅಕ್ಷರ ಅಭ್ಯಾಸ, ಮಧ್ಯಾಹ್ನ ಗಂಟೆ 1 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಗಂಟೆ 4 ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ಪಿ.ಸುಬ್ರಾಯ ಪೈ ಉದ್ಯಮಿ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಬಿ.ಯಡ್ ಕಾಲೇಜಿನ ಪ್ರಾಂಶುಪಾಲೆ ಡಾ|ಶೋಭಿತಾ ಸತೀಶ್, ವಿಟ್ಲ ಲಯನ್ಸ್ ಸಿಟಿ ಅಧ್ಯಕ್ಷ ಜಯರಾಮ್ ಬಲ್ಲಾಳ್, ಹಿಂದೂ ಯುವಸೇನೆ ವಿಟ್ಲ ಘಟಕದ ಅಧ್ಯಕ್ಷ ಪಲಿಮಾರು ರಘುಪತಿ ಪೈ, ಶ್ರೀ ದೇವತಾ ಸಮಿತಿ ಅಧ್ಯಕ್ಷ ಎಂ.ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಸಂಜೆ ವಿಸರ್ಜನಾ ಆರತಿ ನಡೆಯಿತು. ಗಂಟೆ 7ಕ್ಕೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಬಳಿಕ ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯ ಬಳಿ ಪೂಜೆ ವಂದೇ ಮಾತರಂ, ಧ್ವಜಾವತರಣ, ನಂತರ ಕೆರೆಯಲ್ಲಿ ವಿಗ್ರಹ ವಿಸರ್ಜನೆ ನಡೆಯಿತು.