ವಿಟ್ಲ: ಬಿಜೆಪಿ ಮಹಾಶಕ್ತಿ ಕೇಂದ್ರ ವಿಟ್ಲ ಇದರ ವತಿಯಿಂದ ವಿಟ್ಲ ಬಿಜೆಪಿ ಕಛೇರಿಯಲ್ಲಿ ಜನಸಂಘ ಸ್ಥಾಪಕರಲ್ಲಿ ಒಬ್ಬರಾದ ಶ್ರೀ ಪಂಡಿತ್ ದಿನ ದಯಾಳ್ ಉಪಾಧ್ಯಾಯ ಅವರ ಜನ್ಮದಿನೋತ್ಸವನ್ನು ಹಾಗೂ ಸ್ವರ್ಗಸ್ಥರಾದ ಬಿಜೆಪಿಯ ಹಿರಿಯ ಮುಖಂಡರಾದ ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಮತ್ತು ರಾಜ್ಯ ಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಅರುಣ್ ವಿಟ್ಲ, ಕಾರ್ಯದರ್ಶಿ ಶ್ರೀ ಕರುಣಾಕರ ನಾಯ್ತೋಟು, ಬಿಜೆಪಿಯ ಪ್ರಮುಖರಾದ ಶ್ರೀ ಮೋಹನ್ ದಾಸ್ ಉಕ್ಕುಡ , ಶ್ರೀ ಹರೀಶ್ ವಿಟ್ಲ, ಶ್ರೀ ಜೀವನ್ ವಿಟ್ಲ ,ಶ್ರೀ ವೀರಪ್ಪ ಗೌಡ ರಾಯರಬೆಟ್ಟು, v s s ಬ್ಯಾಂಕ್ ವಿಟ್ಲ ಇದರ ಅಧ್ಯಕ್ಷರಾದ ಶ್ರೀ ನರ್ಷಪ್ಪ ಪೂಜಾರಿ ಪರನಿರು, ಪುತ್ತೂರು ಮಂಡಲ st ಮೋರ್ಚ್ ಅಧ್ಯಕ್ಷ ಶ್ರೀ ರಾಜೇಶ್ ಅನ್ನಮೂಲೆ,ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಮಂಜುನಾಥ ಕಲ್ಲಕಟ್ಟ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀ ರಾಮ್ ದಾಸ್ ವಿಟ್ಲ ಶ್ರೀ ಲೋಕನಾಥ್ ಕೊಲ್ಯ ಶ್ರೀಕೃಷ್ಣ ವಿಟ್ಲ ಹಾಗೂ ಪದಾಧಿಕಾರಿಗಳು ಬೂತ್ ನ ಅಧ್ಯಕ್ಷ ಕಾರ್ಯದರ್ಶಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.