- Advertisement -
- Advertisement -
ವಿಟ್ಲ: ಶ್ರೀಮತಿ ಗೀತಾ ಚಂದು ಪೂಜಾರಿ ಎರುಂಬುರವರ ಶುಭಾಶೀರ್ವಾದದಲ್ಲಿ ಕೀರ್ತನಾ ಕ್ರಿಯೇಷನ್ಸ್ ಅರ್ಪಿಸುವ ಶ್ರೀಮತಿ ಮಮತಾ ಹರೀಶ್ ಪೂಜಾರಿ ಎರುಂಬು(ಮಸ್ಕತ್) ಇವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ಎರುಂಬುದ ಮಾಣಿಕ್ಯೊಲು’ ತುಳು ವಿಡಿಯೋ ಭಕ್ತಿಗೀತೆ ಬಿಡುಗಡೆ ಸಮಾರಂಭವು ಎರುಂಬು ಶ್ರೀ ಶಂಕರ ನಾರಾಯಣ ಸನ್ನಿಧಿಯಲ್ಲಿ ಇಂದು ಸಂಜೆ ನಡೆಯಲಿದೆ.
ಈ ಹಾಡಿಗೆ ಪ್ರವೀಣ್ ಜಯ ವಿಟ್ಲರವರು ಸಾಹಿತ್ಯ ಬರೆದು, ನಿರ್ದೇಶನ ಮಾಡಿದ್ದಾರೆ. ತೃಷಾ ಸ್ಟುಡಿಯೋ ಚಂದಳಿಕೆ ಮಾಲೀಕ ಸುರೇಶ್ ದೇವಸ್ಯ ವಿಟ್ಲರವರು ಛಾಯಾಗ್ರಹಣ ಮಾಡಿದ್ದಾರೆ.
ಈ ಸುಂದರವಾದ ಹಾಡನ್ನು ತಮ್ಮ ಸುಸ್ವರದಲ್ಲಿ ಹಾಡಿದವರು ಮಾ. ಆದಿತ್ಯ, ಅಶ್ವಿನಿ ಶ್ರೇಯಾ ವಿಟ್ಲ, ನಿತ್ಯಶ್ರೀ, ಜ್ಞಾನಶ್ರೀ, ಆದ್ಯಶ್ರೀ.
ಇದೇ ಸಂದರ್ಭದಲ್ಲಿ ಪ್ರವೀಣ್ ಜಯ ವಿಟ್ಲ ಬಳಗದವರಿಂದ ಭಕ್ತಿ ಸ್ವರಾಂಜಲಿ ಸಂಗೀತ ಕಾರ್ಯಕ್ರಮವು ನಡೆಯಲಿದೆ.
- Advertisement -