- Advertisement -
- Advertisement -
ವಿಟ್ಲ: ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಮಹಿಳಾ ಹಕ್ಕುಗಳ ಪರವಹಿಸಿ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ನ್ಯಾಯ ಶಾಸ್ತ್ರಜ್ಞರಾಗಿ, ರಾಜಕೀಯ ಪ್ರವೇಶಿಸಿ ಡಾಕ್ಟರೇಟ್ ಪದವಿಗಿಟ್ಟಿಸಿಕೊಂಡು , ಭಾರತದ ಸಂವಿಧಾನದ ಶಿಲ್ಪಿಗಳಾಗಿ, ಸದಾ ಸ್ಮರಣೀಯರಾದ ಡಾಕ್ಟರ್ ಭೀಮರಾವ್ ರಾಮ್ ಜಿ ಅಂಬೇಡ್ಕರ್ ರವರ 130ನೇ ಜನ್ಮದಿನದ ಆಚರಣೆಯನ್ನು ಶಾಲಾ ಸರ್ವ ಶಿಕ್ಷಕರು ಸೇರಿ ಮಹಾನ್ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಲಾಯಿತು.
ಉಪಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಶೆಣೈಯವರು ಡಾ ಬಿ. ಆರ್. ಅಂಬೇಡ್ಕರ್ ರವರ ಸಾಧನೆ, ಆದರ್ಶಗಳ ಬಗ್ಗೆ ವಿವರಿಸಿದರು. ಆಡಳಿತಾಧಿಕಾರಿ ರಾಧಾಕೃಷ್ಣ.ಎ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಸಾಕ್ಷಿಗಳಾದರು.
- Advertisement -