Thursday, May 16, 2024
spot_imgspot_img
spot_imgspot_img

ಉಡುಪಿ: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಖಲೀಲ್..! FIR ದಾಖಲು

- Advertisement -G L Acharya panikkar
- Advertisement -

ಉಡುಪಿ : ಮನೆಯಲ್ಲಿ ಮಹಿಳೆ ಒಬ್ಬಂಟಿಯಾಗಿರುವುದನ್ನು ಗಮಿಸಿದ ಖಾಸಗಿ ಬಸ್ಸಿನ ಮಾಲೀಕನೋರ್ವ ಮನೆಗೆ ಬಂದು ಅನುಚಿತವಾಗಿ ವರ್ತಿಸಿ ಹಾಗೂ ಜೀವ ಬೆದರಿಕೆ ಒಡ್ಡಿದ ಘಟನೆ ಪೆರ್ಡೂರಿನ ಹರಿಖಂಡಿಗೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹರಿಖಂಡಿಗೆಯಲ್ಲಿನ ಹಿಂದು ಮಹಿಳೆಯ ಮನೆಗೆ ನುಗ್ಗಿ ಪೋನ್ ನಂಬರ್ ಕೊಡುವಂತೆ ಅಪ್ಸರ (APSARA) ಎಂಬ ಬಸ್ಸಿನ ಮಾಲೀಕ ಖಲೀಲ್ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ್ದಕ್ಕೆ ಮಹಿಳೆಗೆ ಹಲ್ಲೆ ಮಾಡಿ ಅಶ್ಲೀಲ ಪದಗಳಿಂದ ಬೈದು ಬಟ್ಟೆ ಎಳೆದಿದ್ದಾನೆ. ಈ ವೇಳೆ ಬೊಬ್ಬೆ ಹಾಕಿದಾಗ ನೆರಮನೆಯ ಅವರ ಸಹೋದರ ದಿರುತ್ತಾರೆ. ಆತನನ್ನು ನೋಡಿ ನೀನು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಗೆ ಹಾಕಿರುವುದಾಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!