ವಿಟ್ಲ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕುದ್ರಿಯ ಬಂಟರ ಮನತನದ ಚಾಲಿಯಣ್ಣ ಬರಿಯಾ ತರವಾಡು,’ಕುದ್ರಿಯಗುತ್ತು’ ಟ್ರಸ್ಟ್ನ ಪುನರ್ ರಚನೆಯ ನೊಂದಾವಣಿ ’ಕುದ್ರಿಯ ಗುತ್ತು ತರವಾಡ್ ಟ್ರಸ್ಟ್ (ರಿ) ಕುದ್ರಿಯಗುತ್ತು’ ಎಂಬ ಹೆಸರಿನಲ್ಲಿ ಇಂದು ಪುನರ್ ರಚನೆಯಾಯಿತು.
ಕುಟುಂಬದ ಯಜಮಾನರಾದ ಕೊರಗಪ್ಪ ಶೆಟ್ಟಿ ಕುಂಜತ್ತೂರು ಮುಂದಾಳು ತನದಲ್ಲಿ ನಡೆದ ಪುನರ್ ರಚನಾ ಸಭೆಯಲ್ಲಿ ಅಧ್ಯಕ್ಷ ರವೀಂದ್ರ ಶೆಟ್ಟಿ ಕುಂಜತ್ತೂರು ಇವರನ್ನು ’ಕುದ್ರಿಯ ಗುತ್ತು ತರವಾಡ್ ಟ್ರಸ್ಟ್ (ರಿ) ಇದರ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಕೇಶವ ಬಂಡಾರಿ ಬಜಾಲು, ಹಾಗೂ ಉಪಾಧ್ಯಕ್ಷರಾಗಿ ರಘುನಾಥ ಶೆಟ್ಟಿ ಮಂಗಳೂರು ಇವರು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಗಣೇಶ ರೈ ಅಳಕೆಮಜಲು., ಜೊತೆಕಾರ್ಯದರ್ಶಿ ಲೋಕನಾಥ ಶೆಟ್ಟಿ ಪಿಲಿಕೂರು, ಕೋಶಾಧಿಕಾರಿ ಸೀತರಾಮ ಶೆಟ್ಟಿ ಕುರ್ನಾಡು, ಜೊತೆ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಅಳಕೆಮಜಲು ಆಯ್ಕೆಯಾದರು.
ಸೀತರಾಮ ಶೆಟ್ಟಿ ಮೈರ, ಚಂದ್ರಶೇಖರ ಶೆಟ್ಟಿ ಪಿಲಿಕೂರು, ಅಚ್ಚುತಾಕ್ಷ ಶೆಟ್ಟಿ ಕುಡ್ತಮುಗೇರು , ವಿಜಯಲಕ್ಷ್ಮೀ ಕುದ್ರಿಯ, ಕೆ.ವಿಶ್ವನಾಥ ಶೆಟ್ಟಿ ಅಡ್ಯಾರ್, ಶಿವಪ್ರಸಾದ್ ಶೆಟ್ಟಿ ಅಡ್ಯಾರ್, ತಾರನಾಥ ಶೆಟ್ಟಿ ಬಜಾಲ್, ಸುಧಾಕರ ಶೆಟ್ಟಿ ಸೇನೆರೆ ಕೋಡಿ , ಲೀಲಾವತಿ ಜೋಡುಕಲ್ಲು, ಶಾಂಭವಿ ಮಾಣಿ, ಚಂದ್ರಾವತಿ ತಲಪಾಡಿ ಪದಾಧಿಕಾರಿಗಳಾಗಿ ಆಯ್ಕೆಯಾದರು.