- Advertisement -
- Advertisement -
ವಿಟ್ಲ: ಶ್ರೀ ಮಹಮ್ಮಾಯಿ ಅಮ್ಮನವರ ಹಾಗೂ ಸ-ಪರಿವಾರ ದೈವಗಳ ದೈವಸ್ಥಾನ ಮೇಗಿನಪೇಟೆ, ವಿಟ್ಲ. ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಾರಿಪೂಜೆಯೂ, ಇದೇ ಬರುವ ಎಪ್ರಿಲ್ 28 ಹಾಗೂ 29 ರಂದು ನಡೆಯಲಿದೆ.
ಈ ಹಿನ್ನಲೆಯಲ್ಲಿ ಇದರ ಪೂರ್ವಭಾವಿಯಾಗಿ ಇಂದು ಚಪ್ಪರ ಮುಹೂರ್ತವು ನಡೆಯಿತು. ನಾರಾಯಣ ಪ್ರಸಾದ್ ಬನ್ನಿಂತಾಯ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಕೃಷ್ಣಯ್ಯ ಕೆ. ಬಲ್ಲಾಳ್, ರಾಜೇಶ್ ವಿಟ್ಲ, ಸತೀಶ್ ಆಳ್ವ ಇರಾ ಬಾಳಿಕೆ, ಪದ್ಮನಾಭ ಗೌಡ ಚಂದಪ್ಪಾಡಿ, ರಾಮದಾಸ್ ಶೆಣೈ, ವಿ.ಶೀನ, ಗಣೇಶ್ ಆಳ್ವ ಕಲ್ಲಗದ್ದೆ, ಹಾಗೂ ಗಣ್ಯಾತಿ-ಗಣ್ಯರು ಆಗಮಿಸಿದ್ದು, ಊರಿನ ಸಮಸ್ತರು ಭಾಗಿಯಾಗಿದ್ದರು.
- Advertisement -