- Advertisement -
- Advertisement -
ವಿಟ್ಲ: ದಕ್ಷಿಣ ಕನ್ನಡದ ಹಲವೆಡೆ ಇಂದು ಮುಂಜಾನೆಯೇ ಎನ್ಐಎ ಎಸ್ಡಿಪಿಐ, ಪಿಎಫ್ಐಗೆ ಶಾಕ್ ನೀಡಿದೆ. ಮಂಗಳೂರಿನಲ್ಲಿ ಈಗಾಗಲೇ ದಾಳಿ ಕಾರ್ಯಚರಣೆ ಅಂತ್ಯಗೊಂಡಿದೆ. ಪಿಎಫ್ಐ ಮುಖಂಡರಾದ ಎಕೆ ಅಶ್ರಫ್, ಮೊಯಿದ್ದೀನ್ ಹಳೆಯಂಗಡಿ, ನವಾಜ್ ಕಾವೂರು ಎಂಬವರನ್ನು ಎನ್ಐಎ ವಶಕ್ಕೆ ಪಡೆದಿದೆ.
ಬಂಟ್ವಾಳ, ವಿಟ್ಲ ಠಾಣಾ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಡಿಜಿ ಹಳ್ಳಿ ಕೆ ಜೆ ಹಳ್ಳಿ ಗಲಭೆಗೆ ಸಂಬಂಧಿಸಿ ಬೋಳಂತೂರಿನ ಮಹಮ್ಮದ್ ತಂಸೀರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಎಸ್ಡಿಪಿಐ ಹಾಗೂ ಪಿಎಫ್ಐ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದೆ.
ವಿಟ್ಲದ ಎಸ್ಡಿಪಿಐ ಕಛೇರಿಯಲ್ಲಿ ಪ್ರತಿಭಟನೆ
ವಿಟ್ಲದ ಮೇಗಿನಪೇಟೆಯಲ್ಲಿರುವ ಎಸ್ಡಿಪಿಐ ಕಚೇರಿಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪೊಲೀಸ್ ಪಡೆ ಕಟ್ಟೆಚ್ಚರ
ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡದಲ್ಲಿ ಖಾಕಿ ಪಡೆ ಕಟ್ಟೆಚ್ಚರ ವಹಿಸಲು ನಿರ್ಧರಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಟ್ಲದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
- Advertisement -