Thursday, April 25, 2024
spot_imgspot_img
spot_imgspot_img

ವಿಟ್ಲ: ಉರಿಮಜಲಿನಲ್ಲಿ ಕಮಲಮ್ಮರವರ ಸ್ಮರಣಾರ್ಥ ನೀಲಮ್ಮರವರಿಗೆ ಸನ್ಮಾನ

- Advertisement -G L Acharya panikkar
- Advertisement -

ವಿಟ್ಲ: ಇತ್ತೀಚೆಗೆ ನಿಧನರಾದ ಇಡ್ಕಿದು ಗ್ರಾಮದ ಬಡಜ ಪಾರ್ವತಿ ನಿಲಯದ ಉರಿಮಜಲು ಶಿವರಾಮ‌ ಭಟ್ ರವರ ಪತ್ನಿ ಕಮಲಮ್ಮರವರ ನೆನಪಿಗಾಗಿ ಕಳೆದ ಹಲಾವರು ವರುಷಗಳಿಂದ ಅವರೊಂದಿಗಿದ್ದು, ಅವರ ಒಡನಾಡಿಯಾಗಿದ್ದ  ನೀಲಮ್ಮರವರನ್ನು ಬಡಜ ಮನೆಯಲ್ಲಿ ಸನ್ಮಾನಿಸಲಾಯಿತು.

ಮೃತರ ಪತಿ ಕೆ.ಶಿವರಾಮ ಭಟ್ ಉರಿಮಜಲು, ಜಿ.ಎಸ್. ಉಬಾರ್ಡ್ಕ, ಪುರೋಹಿತರಾದ ವೇ.ಮೂ ನೂಜಿ ಗೋಪಾಲ ಕೃಷ್ಣ ಭಟ್, ವೆ.ಮೂ. ಅನಂತೇಶ್ವರ ಭಟ್, ಮೃತರ ಪುತ್ರ ಪ್ರಕಾಶ್ ಕೆ.ಎಸ್. ಉರಿಮಜಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬೆಳಾಲು ಎಸ್.ಡಿ.ಎಂ ಹೈಸ್ಕೂಲಿನ ಮುಖ್ಯೋಪಾದ್ಯಾಯರಾದ ರಾಮಕೃಷ್ಣ ಭಟ್ ಚೂಂತಾರುರವರು ಸ್ವಾಗತಿಸಿ, ಕಮಲಮ್ಮನವರ  ಹಾಗೂ ನೀಲಮ್ಮರವರ ಒಡನಾಟದ ಬಗ್ಗೆ ಹಾಗೂ ಸನ್ಮಾನದ ಉದ್ದೇಶವನ್ನು ತಿಳಿಸಿದರು.

ಸ್ಥಳೀಯರಾದ ಲೀಲಾವತಿ ವಿ. ಶೆಟ್ಟಿ,  ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು, ಇಡ್ಕಿದು ಗ್ರಾ.ಪಂ ಮಾಜಿ ಅಧ್ಯಕ್ಷ ಗಂಗಾಧರ, ಮೃತರ ಪುತ್ರರಾದ ಮೋಹನ್ ಕೆ.ಎಸ್. ಉರಿಮಜಲು, ನಾಗೇಶ್ ಕೆ.ಎಸ್. ಉರಿಮಜಲು, ಸೊಸೆಯಂದಿರಾದ ಸಾಯಿಸುಧಾ ಪ್ರಕಾಶ್, ಪೂರ್ಣಿಮಾ ಮೋಹನ್, ಡಿಸ್ಟ್ರಿಕ್ಟ್ ನ್ಯಾಯಾದೀಶರಾದ  ಪ್ರಶಾಂತಿ ನಾಗೇಶ್, ಪುತ್ರಿಯರಾದ ಸಂದ್ಯಾ ದೇವಿಪ್ರಸಾದ್ ಭಟ್ ಬುಡ್ನಾರು, ಜ್ಯೋತಿ ರಾಮಕೃಷ್ಣ ಭಟ್ ಚೂಂತಾರು, ಹೊಟೇಲ್ ಬುಡ್ನಾರ್ಸ್ ಡೈನಾರ್ಸ್ ನ‌ ಮಾಲಕರಾದ ದೇವಿ ಪ್ರಸಾದ್ ಭಟ್ ಬುಡ್ನಾರು ಮೈಸೂರು ಮೊಮ್ಮಕ್ಕಳಾದ ನಿಖಿಲಾ ಕೆ.ಪಿ., ಅಭಿರಾಮ್ ಕೆ.ಪಿ., ಪೃಥ್ವಿರಾಮ ಯು. ಎಂ., ಲಕ್ಷ್ಮೀ ಯು. ಎಂ., ಸಾಯಿ ಐಸಿರಿ ಕೆ.ಎನ್. , ಸಾಯಿ ಉತ್ತಮ್ ಕೆ.ಎನ್., ಬಾರವಿ ಸಿ., ವೈಷ್ಣವಿ‌ ಸಿ. ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!