- Advertisement -
- Advertisement -
ವಿಟ್ಲ: ಯುವ ಕೇಸರಿ ಅಬೀರಿ ಅತೀಕಾರಬೈಲು ಚಂದಳಿಕೆ ವತಿಯಿಂದ ಚಂದಳಿಕೆ-ಮಾಡತ್ತಡ್ಕ ರಸ್ತೆಯಲ್ಲಿ ಶ್ರಮದಾನ ನಡೆಸಲಾಯಿತು.
ಚಂದಳಿಕೆ ಕಡೆಯಿಂದ ಮಾಡತ್ತಡ್ಕ ಕಡೆಗೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ಗಿಡಗಂಟಿ ಬೆಳೆದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.
ಈ ಬಗ್ಗೆ ಗಮನಿಸಿದ ಕಾರ್ಯಕರ್ತರು ಬೆಳಿಗ್ಗೆನಿಂದ ಮಧ್ಯಾಹ್ನದವರೆಗೆ ಶ್ರಮದಾನ ನಡೆಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರು.
ಈ ಸಂದರ್ಭ ವಿಟ್ಲ ಮುಡ್ನೂರು ಗ್ರಾ.ಪಂ ಸದಸ್ಯರಾದ ಪುನೀತ್ ಮಾಡತ್ತಾರು, ಪ್ರೇಮಲತಾ ಪಟ್ಲ, ಯುವಕೇಸರಿಯ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಅಧ್ಯಕ್ಷ ಗಂಗಾಧರ ಪೂಜಾರಿ, ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
- Advertisement -