Thursday, April 25, 2024
spot_imgspot_img
spot_imgspot_img

ವಿಟ್ಲ: ವೈದ್ಯನಾಥ, ಮಲರಾಯ ಹಾಗೂ ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರದಲ್ಲಿ ದೈವಗಳ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ

- Advertisement -G L Acharya panikkar
- Advertisement -

ವಿಟ್ಲ: ವೈದ್ಯನಾಥ, ಮಲರಾಯ ಹಾಗೂ ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರ, ಕಂಬಳಬೆಟ್ಟು ಇಲ್ಲಿ ವೈದ್ಯನಾಥ, ಮಲರಾಯ, ಗುಳಿಗ, ಕೊರತಿ ದೈವಗಳ ಗುಡಿ ನಿರ್ಮಾಣಕ್ಕೆ ಆಲಂಪಾಡಿ ನೀಲೇಶ್ವರ ತಂತ್ರಿಗಳಾದ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಡಿದು ಸೇವಾ ಸಹಕಾರ ಸಂಘ ನಿ. ಇದರ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಆಗಮಿಸಿದ್ದರು. ಈ ವೇಳೆ ಸೀಮೆ ಗುರಿಕ್ಕಾರರು, ಮಲರಾಯ ಜೇರ ಸಂಚಲನ ಸಮಿತಿಯ ಗೌರವಾಧ್ಯಕ್ಷ ಕೆ.ಟಿ. ವೆಂಕಟೇಶ್ವರ ಭಟ್ ನೂಜಿ, ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡಾಯಿಮಾರು, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಮಾರ್ ಶೆಟ್ಟಿ ಮೂಡಾಯಿಮಾರು ಸೇರಿದಂತೆ ಸರ್ವಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!