- Advertisement -
- Advertisement -
ಕಾಸರಗೋಡು: ನಿಂತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಞಂಗಾಡ್ನ ಹೊಸಕೋಟಾದ ವಿನಾಯಕ ಟಾಕೀಸ್ ಬಳಿ ಬೀಡಿ ಕಂಪನಿ ಎದುರು ಈ ಘಟನೆ ನಡೆದಿದೆ. ತಳಂಗರ ಚೆಟ್ಟುಂಕುಜಿ ನಿವಾಸಿ ಮುಹಮ್ಮದ್ ಶಬಾಬ್ (25) ಮೃತಪಟ್ಟ ಯುವಕ.
ಹೊಸಕೋಟಾದಲ್ಲಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮುಹಮ್ಮದ್ ಶಬಾಬ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಯುವಕ ಒಬ್ಬನೇ ಇದ್ದ. ಕಾರು ಎರ್ನಾಕುಲಂನಿಂದ ಕಾಸರಗೋಡಿಗೆ ಹಿಂತಿರುಗುತ್ತಿತ್ತು ಎಂದು ವರದಿಯಾಗಿದೆ.
- Advertisement -