- Advertisement -
- Advertisement -
ವೇಣೂರು: ಒಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರಿನ ನಾರಾವಿ ಮಂಜು ನಗರದಲ್ಲಿ ನಡೆದಿದೆ. ಮಂಜು ನಗರದ ನಿವಾಸಿ ಅರ್ಮುಗಂ (45) ಮೃತಪಟ್ಟ ವ್ಯಕ್ತಿ.
ಒಬ್ಬಂಟಿಯಾಗಿ ವಾಸವಾಗಿದ್ದ ಅವರು ಯಾವುದೋ ವಿಚಾರಕ್ಕೆ ಮನವೊಂದು ವಿಷ ಸೇವಿಸಿದ್ದರು. ಬೊಬ್ಬೆಕೇಳಿದ ಸ್ಥಳೀಯ ನಿವಾಸಿ ಬಾಬು ಮೇಸ್ತ್ರಿ ಅವರು ಸ್ಥಳಕ್ಕಾಗಮಿಸಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಯಿತು. ಆದರೆ ಚಿಕ್ಸಿತೆ ಫಲಕಾರಿಯಾಗದೆ ಅರ್ಮುಗಂ ಸಾವನ್ನಪಿದಾರೆ. ವೇಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -