- Advertisement -
- Advertisement -
ಬಂಟ್ವಾಳ: ಕೆದಿಲ ಗ್ರಾಮದ ಪಾಟ್ರಕೋಡಿಯ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.

ಜಮಾಅತ್ ಕಮಿಟಿ ಅಧ್ಯಕ್ಷರಾದ ಜನಾಬ್ ಹಮೀದ್ ಹಾಜಿ ದ್ವಜಾರೋಹಣಗೈದರು. ಸದರ್ ಉಸ್ತಾದ್ ರಾದ ಹನೀಫ್ ಸಖಾಫಿ ಸ್ವಾಗತಿಸುದರೊಂದಿಗೆ ಅರಂಭವಾದ ಕಾರ್ಯಕ್ರಮದಲ್ಲಿ ಮಸೀದಿ ಖತೀಬರಾದ ಖಲಂದರ್ ಶಾಫಿ ಬಾಖವಿ ಅಲ್ ಮನ್ನಾನಿರವರು ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರ ಬಲಿದಾನಗಳ ಬಗ್ಗೆ ವಿವರಿಸಿದರು ಮತ್ತು ಪ್ರಜೆಗಳಾದ ನಾವು ನಮಗೆ ಸ್ವಾತಂತ್ರ್ಯ ದ ಮೂಲಕ ಸಿಕ್ಕಿದ ಹಕ್ಕುಗಳ ಜೊತೆಯಲ್ಲಿ ಕರ್ತವ್ಯ ಗಳನ್ನು ನಿಭಾಯಿಸುವಂತೆ ಕರೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಜಮಾಹತರು, ಜಮಾಹತ್ ಸಮಿತಿಯ ಉಪಾಧ್ಯಕ್ಷರಾದ ಕೆ. ಎಸ್. ಇಸುಬು, ಪ್ರಧಾನ ಕಾರ್ಯದರ್ಶಿಗಳಾದ ತಸ್ರೀಪ್ ತಾಳಿಪಡ್ಪು, ಕಾರ್ಯದರ್ಶಿ ಬತೀಷ್ ಬಾಯಬೆ, ಜಮಾಹತ್ ಸಮಿತಿಯ ಸದಸ್ಯರು ಹಾಗೂ ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು. ಮದರಸ ಅಧ್ಯಾಪಕರಾದ ಮುನೀರ್ ಮದನಿ ಪ್ರತಿಜ್ಞಾ ಬೋಧನೆ ನೀಡಿ ವಂಧಿಸಿದರು.


- Advertisement -








