Tuesday, April 30, 2024
spot_imgspot_img
spot_imgspot_img

ವಿಚಿತ್ರ ಡೆತ್‌ನೋಟ್ ಬರೆದು ವಿದ್ಯಾರ್ಥಿ ಆತ್ಮಹತ್ಯೆ!!

- Advertisement -G L Acharya panikkar
- Advertisement -
vtv vitla

ಯುವಕನೊಬ್ಬ ವಿಚಿತ್ರವಾಗಿ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ.

ಅಥಣಿಯ ಎಸ್‌ಎಸ್‌ಎಂಸಿ ಕಾಲೇಜಿನ ಕಾಮರ್ಸ್ ವಿಭಾಗದ ಆಕಾಶ್ ಮಹಾದೇವ ಮಿರ್ಜಿ (22) ಮೃತ ಪಟ್ಟ ವಿದ್ಯಾರ್ಥಿ.

ತಾವಂಶಿ ಗ್ರಾಮದ ಅನಂತಪೂರ ರಸ್ತೆಯ ಪರಮಾನಂದ ತೋಟದ ಬಳಿ ನೇಣಿಗೆ ಶರಣಾಗಿದ್ದಾನೆ. ನನ್ನ ಸಾವಿಗೆ ನಾನೇ ಕಾರಣ. ನಮ್ಮ ಮನೆಯವರು ಕಾರಣರಲ್ಲ. ಯಾವ ಹುಡುಗಿಗಾಗಿಯೂ ನಾನು ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರಾದರೂ ಪೊಲೀಸ್ ಸ್ಟೇಷನ್‌ಗೆ ಹೋದರೆ ನಿಮ್ಮ ಮನೆ ಸರ್ವನಾಶವಾಗುತ್ತದೆ ಎಂದು ಡೆತ್‌ನೋಟ್ ಬರೆದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಅಥಣಿ ಪೊಲೀಸರು ಪ್ರಕರಣ ದಾಖಲಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!