ಮಡಿಕೇರಿ : ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗಿಗೆ ಆಗಮಿಸಿದ ತಂಡವೊಂದರ ಮೇಲೆ ದಾಳಿ ನಡೆದ ಘಟನೆ ವರದಿಯಾಗಿದೆ. ಅನ್ಯಕೋಮಿನ ಯುವಕ ಯುವತಿಯರಿದ್ದ ಪ್ರವಾಸಿಗರ ತಂಡದಲ್ಲಿ ಹಿಂದೂ ಯುವತಿ ಇರುವುದಕ್ಕೆ ಆಕ್ಷೇಪಿಸಿ ಕೆಲ ಸಂಘಟನೆಯ ಕಾರ್ಯಕರ್ತರ ಗುಂಪು ದಾಳಿ ನಡೆಸಿದ ಘಟನೆ ಅ 16 ರಂದು ನಡೆದಿದೆ.
ಈ ಬಗ್ಗೆ ಹಲ್ಲೆಗೊಳಗಾದ ಯುವಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಘಟನೆಯೂ ಮಡಿಕೇರಿಯ ಪ್ರಖ್ಯಾತ ಪ್ರವಾಸಿ ತಾಣ ಮಂದಲ್ ಪಟ್ಟಿ ಎಂಬಲ್ಲಿ ನಡೆದಿದೆ. ನಂದಾ ಕಿಶನ್, ಸಮನ್ ಸಾಜಿದ್, ಶಂಶೀರ್ ಹಾಗೂ ಇಬ್ಬರು ಯುವತಿಯರು ಮತ್ತು ಓರ್ವ ಹಿಂದೂ ಯುವತಿ ಜತೆಯಾಗಿ ಮಡಿಕೇರಿಕೆ ಪ್ರವಾಸಕ್ಕೆ ಹೋಗಿದ್ದರು. ಯುವಕರು ಪ್ರವಾಸಕ್ಕೆ ತೆರಳಲು ಪೋಷಕರಿಂದ ಅನುಮತಿ ಕೂಡ ಪಡೆದಿದ್ದರು. ಮಂದಾಲ್ ಪಟ್ಟಿ ಸುತ್ತಾಡಿದ ಯುವಕರು ವಾಪಸ್ಸಾಗಲು ಕಾರಿನ ಬಳಿ ಬಂದಾಗ ಅವರನ್ನು ಐವರು ಯುವಕರ ಗುಂಪು ತಡೆದಿದೆ.
ಹಿಂದೂ ಯುವತಿಯೊಬ್ಬರು ಇಬ್ಬರು ಮುಸ್ಲಿಮ್ ಯುವಕರೊಂದಿಗೆ ಪ್ರವಾಸಕ್ಕೆ ಬಂದಿದ್ದರ ವಿರುದ್ಧ ಈ ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಕ್ಷಣವೇ 5 ಯುವಕರೊಂದಿಗೆ ಇನ್ನೂ ಒಂದಷ್ಟು ಮಂದಿ ಸೇರಿಕೊಂಡು ಸಮನ್, ಶಂಶೀರ್ ವಿರುದ್ಧ ದಾಳಿ ನಡೆಸಿದ್ದಾರೆ. ಮುಸ್ಲಿಂ ಯುವಕರ ಹಾಗೂ ಇಬ್ಬರು ಯುವತಿಯರ ಫೋಟೋವನ್ನು ಕ್ಲಿಕಿಸಿದ ತಂಡ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಟೊಗಳು ನಿನ್ನೆ ಸಂಜೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಅದರಲ್ಲಿ ಮಂಗಳೂರು ಕಡೆಯ ಯುವಕ ಯುವತಿ ಎಂದು ಕೂಡ ಉಲ್ಲೇಖಿಸಲಾಗಿತ್ತು. ಅವರು ಮಂಗಳೂರು ಬಾಗದವರೇ ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ ಈ ಪ್ರವಾಸಿಗರ ತಂಡ ಬಂದಿದ್ದ ಕಾರು ಉಡುಪಿ ರಿಜಿಸ್ಟೇಷನ್ ಹೊಂದಿರುವುದನ್ನು ವೈರಲ್ ಪೋಟೋದಲ್ಲಿ ಗಮನಿಸ ಬಹುದಾಗಿದೆ ದಾಳಿಯ ಘಟನೆಯನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿವರಿಸಲಾಗಿರುವುದು ಕೂಡ ಕಂಡು ಬಂದಿದೆ. ಈ ಬಗ್ಗೆ ನಂದಾ ಕಿಶನ್ ಎಂಬವರು ದಾಳಿ ನಡೆಸಿದ ತಂಡದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅನಾಮಿಕ ತಂಡದ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.