Saturday, May 18, 2024
spot_imgspot_img
spot_imgspot_img

ಆಟಿಡೊಂಜಿ ದಿನ ಆನ್ಲೈನ್ ಸ್ಪರ್ಧೆ; ಆಟಿ ವಿಶೇಷತೆಯ ಕುರಿತು ಮಾತುಗಳು ಸ್ಪರ್ಧೆಯಲ್ಲಿ ವಿಜೇತರಾದ ಪುತ್ತೂರಿನ ಜ್ಞಾನ ರೈ ಕುರಿಯರವರಿಗೆ ಪ್ರಶಸ್ತಿ ನೀಡಿ ಗೌರವ

- Advertisement -G L Acharya panikkar
- Advertisement -
driving

ಪುತ್ತೂರು: ತುಳುನಾಡು ರಕ್ಷಣಾ ವೇದಿಕೆ ವಾಮದಪದವು ಘಟಕ ತುಳುನಾಡಿನ ಸಂಸ್ಕೃತಿಯ ಆಟಿ ತಿಂಗಳ ವಿಶೇಷತೆಯ ಪ್ರಯುಕ್ತ ಆಯೋಜಿಸಿದ್ದ ಆಟಿಡೊಂಜಿ ದಿನ ಆನ್ಲೈನ್ ಸ್ಪರ್ಧೆಯ ಹೊರವಲಯದ ಪ್ರತಿಭೆಗಳ ಮುಕ್ತ ವಿಭಾಗದಲ್ಲಿ ಆಟಿ ವಿಶೇಷತೆಯ ಕುರಿತು ಮಾತುಗಳು ಸ್ಪರ್ಧೆಯಲ್ಲಿ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಜ್ಞಾನ ರೈ ಕುರಿಯ ವಿಜೇತರಾಗಿದ್ದಾರೆ.

ಇವರನ್ನು ಅ.3ರಂದು ವಾಮದಪದವಿನ ಗಣೇಶ ಮಂದಿರದಲ್ಲಿ ನಡೆದ ತುಳುನಾಡ ಲೇಸು ಪ್ರಶಸ್ತಿಪ್ರದಾನ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಸಮ್ಮುಖದಲ್ಲಿ ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾದ ಇವರು ಉದ್ಯಮಿ ಜಯರಾಮ ರೈ ಮತ್ತು ಸುದ್ದಿ ಚಾನೆಲ್ ನಿರೂಪಕಿ ಹೇಮಾ ಜಯರಾಮ ರೈ ದಂಪತಿ ಪುತ್ರಿ.

- Advertisement -

Related news

error: Content is protected !!