Friday, April 26, 2024
spot_imgspot_img
spot_imgspot_img

ಉಡುಪಿ: ಬಾರ್‌ನಲ್ಲಿ ಇತ್ತಂಡಗಳ ನಡುವೆ ಹೊಡೆದಾಟ; ದೂರು ಪ್ರತಿದೂರು ದಾಖಲು

- Advertisement -G L Acharya panikkar
- Advertisement -

ಉಡುಪಿಯ ಬಾರ್‌ & ಹೋಟೆಲ್ ವೊಂದರಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

ಈ ಬಗ್ಗೆ ಕಾಪುವಿನ ಉದ್ಯಾವರದ ಯೋಗೀಶ್ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಯೋಗೀಶ್‌ ಎಂಬವರು ತನ್ನ ಅಣ್ಣ ಮನೋಹರ್ ಪೂಜಾರಿಯವರೊಂದಿಗೆ ನಗರದ ಹೋಟೆಲ್ ವೊಂದಕ್ಕೆ ಹೋಗಿದ್ದರು. ಈ ವೇಳೆ ಹೋಟೇಲ್‌ನಲ್ಲಿ ಇದ್ದ ಸೂರಜ್, ಅನಿಲ್ ಹಾಗೂ ಇತರ ಇಬ್ಬರು ಒಟ್ಟು ಸೇರಿ ಯೋಗೀಶ್ ಪೂಜಾರಿ ಹಾಗೂ ಅವರ ಅಣ್ಣನಿಗೆ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಟೇಬಲ್ ಮೇಲಿದ್ದ ಬೀಯರ್ ಗ್ಲಾಸ್ ನಿಂದ ಹೊಡೆದು ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದೇ ಘಟನೆ ಗೆ ಸಂಬಂಧಿಸಿ ಉಡುಪಿಯ ಅನಿಲ್ ಎಂಬವರೂ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ರಾತ್ರಿ ತನ್ನ ಸ್ನೇಹಿತ ಅವಿನಾಶ್ ರವರೊಂದಿಗೆ ನಗರದ ಹೋಟೇಲ್ ವೊಂದಕ್ಕೆ ಹೋಗಿದ್ದು, ಈ ವೇಳೆ ಹೋಟೆಲ್ ನಲ್ಲಿ ಇದ್ದ ಮನೋಹರ, ಯೋಗೀಶ್ ಮತ್ತು ಇತರ ಇಬ್ಬರು ಒಟ್ಟು ಸೇರಿ ಅನಿಲ್ ಅವರಿಗೆ ಬೈದು ನಿಂದನೆ ಮಾಡಿರುವುದಲ್ಲದೆ, ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಮಾತ್ರವಲ್ಲದೆ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಒತ್ತಿ ಹಿಡಿದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ

. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ಪ್ರತಿ ದೂರು ದಾಖಲಾಗಿದೆ.

- Advertisement -

Related news

error: Content is protected !!