Friday, April 26, 2024
spot_imgspot_img
spot_imgspot_img

ಕಾಂಗ್ರೆಸ್ ಪಾದಯಾತ್ರೆ ಮಾಡಲಿ, ಕಾನೂನು ತನ್ನ ಕೆಲಸ ತಾನು ಮಾಡುತ್ತೆ; ಕೆ. ಸುಧಾಕರ್​

- Advertisement -G L Acharya panikkar
- Advertisement -
suvarna gold

ಚಿಕ್ಕಬಳ್ಳಾಪುರ: ಕಾಂಗ್ರೆಸ್​ನವ್ರು ಮೇಕೆದಾಟು ಪಾದಯಾತ್ರೆ ಮಾಡಲಿ, ಕಾನೂನು ಅದರ ಕೆಲಸ ಮಾಡುತ್ತೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್​​ ಟಾಂಗ್​ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್​ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಕೆಲವೇ ಗಂಟೆಗಳು ಬಾಕಿಯಿದ್ದು ಚಟುವಟಿಕೆಗಳು ಜೋರಾಗಿವೆ. ಇದರ ಮುಂದಾಳತ್ವನ್ನು ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕೂಡ ಮೇಕೆದಾಟು ಸಂಗಮಕ್ಕೆ ತೆರಳಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಇತ್ತ ಆಡಳಿತಾರೂಢ ಬಿಜೆಪಿ ನಾಯಕರು ಸಾಧ್ಯವಾದಷ್ಟು ಮಟ್ಟಿಗೆ ಪಾದಯಾತ್ರೆಯನ್ನು ಠುಸ್​ ಮಾಡುವ ಪ್ಲಾನ್​​ ಮಾಡುತ್ತಿದ್ದಾರೆ ಎನ್ನಲಾಗಿದೆ.

vtv vitla
vtv vitla

ಪಾದಯಾತ್ರಗೆ ಸಂಬಂಧಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿದ್ರೆ, ಕಾನೂನು ಅದರ ಕೆಲಸ ಮಾಡಲಿದೆ. ಅದರಲ್ಲಿ ಏನು ವಿಶೇಷತೆಯಿಲ್ಲ. ಇನ್ನು ಸರ್ಕಾರ ಜಾರಿಗೆ ತಂದಿರುವ ವಿಕೇಂಡ್​ ಕರ್ಫ್ಯೂಗೆ ಉತ್ತಮವಾದ ಸ್ಪಂದನೆ ದೊರಕಿದ್ದು ಒಮಿಕ್ರಾನ್​ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಾವಶ್ಯಕ ಎಂದು ಸುಧಾಕರ್​ ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!