Wednesday, April 24, 2024
spot_imgspot_img
spot_imgspot_img

ಕೊಡಾಜೆ: ಬದ್ರಿಯಾ ಜುಮಾ ಮಸೀದಿ ವತಿಯಿಂದ ಧಾರ್ಮಿಕ ಪ್ರವಚನ

- Advertisement -G L Acharya panikkar
- Advertisement -
ಬಂಟ್ವಾಳ: ಮಾಣಿ ಸಮೀಪದ ಕೊಡಾಜೆ ಬದ್ರಿಯ ಜುಮಾ ಮಸೀದಿ ಇದರ ವತಿಯಿಂದ ಎರಡು ದಿನಗಳ  ಧಾರ್ಮಿಕ ಪ್ರವಚನ ಕಾರ್ಯಕ್ರಮವು  ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸ ವಠಾರದ ಮರ್ಹೂಂ ಮುಹಮ್ಮದ್ ಹಾಜಿ ನಗರ, ಮರ್ಹೂಂ ಸುಲ್ತಾನ್ ಹಾಜಿ ವೇದಿಕೆಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಿತು.

ಉಡುಪಿ, ಚಿಕ್ಕಮಂಗಳೂರು ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಬದ್ರಿಯಾ ಜುಮಾ ಮಸೀದಿ ಗೌರಾವಾಧ್ಯಕ್ಷ ಸಯ್ಯಿದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ದುಃಹಾ ನೆರವೇರಿಸಿದರು. ಮಸೀದಿ ಅದ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್ ಅದ್ಯಕ್ಷತೆ ವಹಿಸಿದ್ದರು.

ಬದ್ರಿಯಾ ಜುಮಾ ಮಸೀದಿ ಖತೀಬ್ ಅಬೂ ಉಮೈರ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ, ಅಂತರಾಷ್ಠೀಯ ಯುವ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಅಬುದಾಭಿ ಮುಖ್ಯ ಪ್ರಭಾಷಣ ಗೈದರು  

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ  ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಪೈಝಿ ತೋಡಾರ್,  ಬದ್ರಿಯಾ ಜುಮಾ ಮಸೀದಿ ಮಾಜಿ ಖತೀಬ್ ಹಾಜಿ ಪಿ.ಕೆ ಆದಂ ದಾರಿಮಿ, 

ಎಸ್ಕೆಎಸ್ಎಸ್ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, ಅಬೂಬಕ್ಕರ್ ಸಿದ್ದೀಕ್ ಫೈಝಿ ಪಾರ್ಪಕಜೆ ಮಾತನಾಡಿದರು.

ಕಾರ್ಯಕ್ರಮದ ಸ್ವಾಗತ ಸಮೀತಿ ಅಧ್ಯಕ್ಷ ಉಮರ್ ಹಾಜಿ ರಾಜ್ ಕಮಲ್, ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಜಲಾಲಿ ಕಲ್ಲೇಗ, ಶೇಖ್ ಮುಹಮ್ಮದ್ ಇರ್ಫಾನಿ ಕಲ್ಲಡ್ಕ, ಸೈದಾಲಿ ಮುಸ್ಲಿಯಾರ್ ಪರ್ಲೊಟ್ಟು, ಅಬ್ದುಲ್ ಹಮೀದ್ ಬಾಖವಿ ಕಬಕ, ಖಲಂದರ್ ಶಾಫಿ ಬಾಖವಿ ಅಲ್ ಮನ್ನಾನಿ ಪಾಟ್ರಕೋಡಿ, ಅಬ್ದುಲ್ ಮಜೀದ್ ದಾರಿಮಿ ಏನಾಜೆ, ಉಮರ್ ಫೈಝಿ ಗಡಿಯಾರ, ಕೆ.ವಿ.ಅಬ್ದುಲ್ ಮಜೀದ್ ದಾರಿಮಿ ಮಿತ್ತೂರು, ಇಸ್ಮಾಯಿಲ್ ಆಸಿಫ್ ಹನೀಫಿ ಅಲ್ ಹಂದಾನಿ ಸೂರಿಕುಮೇರು, ಹಾಜಿ ಅಬ್ದುಲ್ ಖಾದರ್ ಕೂರ್ನಡ್ಕ, ಉಮರ್ ಫಾರೂಕ್ ಹಾಜಿ ಸುಲ್ತಾನ್, ಮುಹಮ್ಮದ್ ರಫೀಕ್ ಹಾಜಿ ಸುಲ್ತಾನ್, ಮುಹಮ್ಮದ್ ನವಾಝ್ ಭಗವಂತಕೋಡಿ, ಹಂಝ ನೆಡ್ಯಾಲ್ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾದ ಕೆ.ಎಂ.ಉಸ್ಮಾನುಲ್ ಫೈಝಿ ತೋಡಾರ್ ಅವರನ್ನು ಸನ್ಮಾನಿಸಲಾಯಿತು. ಶೈಖುನಾ  ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ಸಿಂಸಾರುಲ್ ಹಕ್ ಹುದವಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸ ಲಾಯಿತು ಮತ್ತು ಸ್ವಯಂಸೇವಕರ ಸಮವಸ್ತ್ರ ಬಿಡುಗಡೆ ಗೊಳಿಸಲಾಯಿತು.

ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಮ್ ಪಿ.ಎ.ಝಕರಿಯಾ ಮರ್ದಾಳ ಸ್ವಾಗತಿಸಿ, ಮುಅಲ್ಲಿಮ್ ಅಬ್ದುಲ್ ನಾಸಿರ್ ಮದನಿ ಕಿರಾಅತ್ ಪಠಿಸಿದರು. ಸ್ವಾಗತ ಸಮಿತಿ ಕನ್ವೀನರ್ ಹನೀಫ್ ಖಾನ್ ಕೊಡಾಜೆ ಹಾಗೂ ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!