Sunday, May 19, 2024
spot_imgspot_img
spot_imgspot_img

ಚಾರ್ಮಾಡಿ: ಕೃಷಿ ತೋಟಕ್ಕೆ ಕಾಡಾನೆ ದಾಳಿ; ಅಪಾರ ಪ್ರಮಾಣದ ಕೃಷಿ ನಾಶ

- Advertisement -G L Acharya panikkar
- Advertisement -

ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿಯನ್ನು ನಾಶಗೈದ ಘಟನೆ ನಡೆದಿದೆ. ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದ ಮಜಲು ನಿವಾಸಿ ಅನಂತ್ ರಾವ್ ರವರ ತೋಟಕ್ಕೆ ನುಗ್ಗಿದ ಕಾಡಾನೆಯು ಸುಮಾರು 50 ಅಡಿಕೆ ಗಿಡಗಳು, 2 ತೆಂಗು ಹಾಗೂ ಅಪಾರ ಪ್ರಮಾಣದ ಬಾಳೆ ಗಿಡಗಳನ್ನು ಧ್ವಂಸಗೊಳಿಸಿದೆ.

ಸುಮಾರು 3 ತಿಂಗಳ ಹಿಂದೆಯೂ ಇವರ ತೋಟಕ್ಕೆ ಕಾಡಾನೆ ನುಗ್ಗಿ, ಕೃಷಿಯನ್ನು ನಾಶಗೊಳಿಸಿತ್ತು. ನ.19 ರಂದು ರಾತ್ರಿಯೂ ಇಲ್ಲಿಂದ ಸುಮಾರು 4 ಕಿಮೀ ದೂರದ ಕಡಿರುದ್ಯಾವರ ಪ್ರದೇಶದಲ್ಲಿ ಕಾಡಾನೆ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿದ್ದರು.

- Advertisement -

Related news

error: Content is protected !!