- Advertisement -
- Advertisement -
ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿಯನ್ನು ನಾಶಗೈದ ಘಟನೆ ನಡೆದಿದೆ. ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದ ಮಜಲು ನಿವಾಸಿ ಅನಂತ್ ರಾವ್ ರವರ ತೋಟಕ್ಕೆ ನುಗ್ಗಿದ ಕಾಡಾನೆಯು ಸುಮಾರು 50 ಅಡಿಕೆ ಗಿಡಗಳು, 2 ತೆಂಗು ಹಾಗೂ ಅಪಾರ ಪ್ರಮಾಣದ ಬಾಳೆ ಗಿಡಗಳನ್ನು ಧ್ವಂಸಗೊಳಿಸಿದೆ.
ಸುಮಾರು 3 ತಿಂಗಳ ಹಿಂದೆಯೂ ಇವರ ತೋಟಕ್ಕೆ ಕಾಡಾನೆ ನುಗ್ಗಿ, ಕೃಷಿಯನ್ನು ನಾಶಗೊಳಿಸಿತ್ತು. ನ.19 ರಂದು ರಾತ್ರಿಯೂ ಇಲ್ಲಿಂದ ಸುಮಾರು 4 ಕಿಮೀ ದೂರದ ಕಡಿರುದ್ಯಾವರ ಪ್ರದೇಶದಲ್ಲಿ ಕಾಡಾನೆ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿದ್ದರು.
- Advertisement -