Tuesday, April 23, 2024
spot_imgspot_img
spot_imgspot_img

ಪುತ್ತೂರು: ಸೋಷಿಯಲ್ ಮೀಡಿಯ ಮೂಲಕ ಪರಿಚಯ; ರಾಯಚೂರಿನಿಂದ ಬಂದ ಯುವಕನನ್ನು ತರಾಟೆಗೆ ತೆಗೆದುಕೊಂಡ ಅನ್ಯಕೋಮಿನ ಯುವಕರು

- Advertisement -G L Acharya panikkar
- Advertisement -
driving

ಪುತ್ತೂರು: ರಾಯಚೂರು ಮೂಲದ ಹಿಂದೂ ಯುವಕನೋರ್ವ ಪುತ್ತೂರು ಮೂಲದ ಪುತ್ತೂರಿನ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಭೇಟಿಯಾಗಿ ಹಿಂದೂಸ್ತಾನ್ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಲು ತೆರಳಿದ್ದಾರೆ. ಈ ವಿಷಯ ತಿಳಿದ ಅನ್ಯಕೋಮಿನ ಯುವಕರು ಹಿಂದೂ ಯುವಕನನ್ನೂ ತರಾಟೆಗೆ ತೆಗೆದುಕೊಂಡು ಆತನಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ಸೆ.1 ರಂದು ಮಧ್ಯಾಹ್ನ ಪುತ್ತೂರಿನಲ್ಲಿ ನಡೆದಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳು ಅವರನ್ನು ಆಟೋ ಮೂಲಕ ಪೊಲೀಸ್ ಠಾಣೆಗೆ ಹೋಗಲು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ಸ್ಟಾಗ್ರಾಮ್ ಮೂಲಕ ರಾಯಚೂರು ಮೂಲದ ಹಿಂದೂ ಯುವಕರಿಗೆ ಪುತ್ತೂರು ಮೂಲದ ಅನ್ಯಕೋಮಿನ ಯುವತಿಯರ ಪರಿಚಯವಾಗಿದ್ದು ಅವರನ್ನು ಭೇಟಿ ಮಾಡಲು ಇಂದು ಪುತ್ತೂರಿಗೆ ಬಂದಿದ್ದರು ಎನ್ನಲಾಗಿದೆ. ಸದ್ಯ ಪುತ್ತೂರು ನಗರ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!