- Advertisement -
- Advertisement -
ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ತಮ್ಮ ಮನೆಯ ಬಾಡಿಗೆ ಕೇಳಿದಕ್ಕೆ ಕುಪಿತರಾದ ಕಿರಾತಕ ದುಷ್ಕರ್ಮಿಗಳು ಮನೆಯೊಡತಿಯ ಕತ್ತನ್ನೇ ಸೀಳಿ ಹತ್ಯೆ ಮಾಡಿದ್ದಾರೆ.
ಪಾರ್ವತಮ್ಮ ಎಂಬ ಮಹಿಳೆಯೇ ಹೀಗೆ ಕೊಲೆಯಾದವರು. ಗಂಡ ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು, ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಕೊಲೆ ಮಾಡಿದವರ ಜಾಡು ಹಿಡಿದು, ಹತ್ಯೆ ಮಾಡಿದ್ದಾರೆ ಎನ್ನಲಾದ ಅರಕಲಗೂಡಿನ ಶಫೀರ್ ಹಾಗೂ ಕೋಲಾರ ಜಿಲ್ಲೆಯ ಮಾಲೂರಿನ ಸೈಯದ್ ನನ್ನು ಬಂಧಿಸಿದ್ದಾರೆ.
- Advertisement -