ಧೂಮಾವತಿ ದೈವಸ್ಥಾನ ಮಣೆಮಜಲು ವಿಟ್ಲ ಮೂಡ್ನಾರು ಇಲ್ಲಿ ದಿನಾಂಕ: 10-04-2020ನೇ ಆದಿತ್ಯವಾರದಂದು ಧೂಮಾವತಿ ಸಪರಿವಾರ ದೈವಗಳ ಬ್ರಹ್ಮಕಲಶವು ಕುಂಟುಕುಡೇಲು ರಘುರಾಮ ತಂತ್ರಿಯವರ ನೇತ್ರತ್ವದಲ್ಲಿ ಜರಗಲಿರುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮದ ವಿವರ:
ದಿ :09-04-2020ನೇ ಶನಿವಾರ ಸಂಜೆ 5.00ಕ್ಕೆ ಸಾಮೂಹಿಕ ಪ್ರಾರ್ಥನೆ, ಪಂಚಗವ್ಯಾದಿ ಸ್ಥಳಶುದ್ಧಿ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ ಮತ್ತು ಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಅಸ್ತ್ರಕಲಶ, ಅದಿವಾಸ ಪ್ರಾಕಾರ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ
ದಿ: 10-04-2020ನೇ ಆದಿತ್ಯವಾರ ಬೆಳಿಗ್ಗೆ 8.00ರಿಂದ ಗಣಪತಿ ಹವನ, ಅದಿವಾಸ ಹೋಮ ಸಹಿತ ಬ್ರಹ್ಮಕಲಶ ಪೂಜೆ, ಬ್ರಹ್ಮಕಲಶಾಭಿಷೇಕ, ಪೂಜಾ ತಂಬಿಲಗಳು, ಪ್ರಸಾದ ವಿತರಣೆ, ಅನ್ನಸಂತರ್ಪಣೆ.
ಸಂಜೆ ಗಂಟೆ 4.00ಕ್ಕೆ-ಓಲಸರಿ ಗದ್ದೆ ಶುದ್ಧಿಕಲಶ ಜರುಗಲಿದೆ.
ದಿ: 19-04-2020ನೇ ಮಂಗಳವಾರ ಸಂಜೆ 6.15ಕ್ಕೆ ನೂಜಿಗೆ ಭಂಡಾರ ಬರುವುದು. ನಂತರ ಚೆಂಡಾಟ, ಓಲಸರಿ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ.
ದಿ: 21-04-2020ನೇ ಗುರುವಾರ ಸಂಜೆ 6.15ಕ್ಕೆ ಮಂಜಿಕೋಡಿ ಮಣೆಮಜಲಿಗೆ ಭಂಡಾರ ಬರುವುದು. ನಂತರ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ.