ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ – ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ಇದರ ಚತುರ್ಥ ವಾರ್ಷಿಕ ಉತ್ಸವದ ಪ್ರಯುಕ್ತ ಒಡಿಯೂರು ಶ್ರೀ, ಮಾಣಿಲ ಶ್ರೀ ಹಾಗೂ ಕಣಿಯೂರು ಶ್ರೀ ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ಜ.14 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏಕಾಹ ಭಜನೆ ನಡೆಯಲಿದೆ.
ಸಂಜೆ ಘಂಟೆ 5:00ಕ್ಕೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಹಸಿರುವಾಣಿ ಹೊರೆಕಾಣಿಕೆ ಮತ್ತು ಭಜನಾ ಉಲ್ಪೆ ಮೆರವಣಿಗೆ ನಡೆಯಲಿದೆ.
“ಏಕಾಹ ಭಜನೆ”ಯಲ್ಲಿ ಭಾಗವಹಿಸುವ ಭಜನಾ ಮಂಡಳಿಗಳು
- ಬೆಳಗ್ಗೆ 6:58ರಿಂದ ಭಜನೆ ಪ್ರಾರಂಭ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ –
- ವಿಟ್ಲ ಸೀಮೆ 9.00- 10.30 ಶ್ರೀ ವಿಶ್ವನಾಥ ದೇವಾಡಿಗ ಮತ್ತು ಬಳಗ, ವಿಟ್ಲ
- 10:30 – 12:00 ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿ, ವಿಟ್ಲ
- 12:00 – 01:30 ಶ್ರೀ ದೇವಿ ಮಕ್ಕಳ ಭಜನಾ ಮಂಡಳಿ, ಸಾಲೆತ್ತೂರು
- 01:30 – 03:00 ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗ
- 03:00 04:30 ಶ್ರೀಮತಿ ಶಶಿಕಲಾ – ಶಿವಗಣೇಶ್, ಕಾಡುಮಠ ಮತ್ತು ಬಳಗ
- 4.30- 6.21 ಶ್ರೀ ದೇವಿ ಮಹಿಳಾ ಭಜನಾ ಮಂಡಳಿ, ದೇವಿನಗರ – ಪುಣಚ
- 6.21 ಭಜನಾ ಮಂಗಲೋತ್ಸವ
19-01-2022 ಬುಧವಾರ ಹಾಗೂ 20-01-2022 ಗುರುವಾರ ರಾತ್ರಿ ಘಂಟೆ 8:00ಕ್ಕೆ ಭಜನಾ ಪರಿಷತ್ತಿನ ವತಿಯಿಂದ ಶ್ರೀ ದೇವರ ಭಜನಾ ಸುತ್ತುಬಲಿ ನೆರವೇರಲಿರುವುದು.
ಭಗವದ್ಭಕ್ತರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಪಂಚಲಿಂಗೇಶ್ವರ ಭಕ್ತ ವೃಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ, ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ ಪ್ರಕಟಣೆಯಲ್ಲಿ ತಿಳಿಸಿದೆ.