- Advertisement -
- Advertisement -
ವಿಟ್ಲ: ಕೊಳ್ನಾಡು ಗ್ರಾಮದ ಕುಡ್ತಮುಗೇರು ಮಂಕುಡೆ ಅಂಗನವಾಡಿ ಕೇಂದ್ರದ ಜಗಲಿಯಲ್ಲಿ ಶನಿವಾರ ರಾತ್ರಿ ಬಡ ಕುಟುಂಬವೊಂದು ಕಂಡುಬಂದಿದೆ.
ಈ ಸುದ್ದಿ ತಿಳಿದ ಸ್ಥಳೀಯ ಯುವಕರು ಕೇಂದ್ರಕ್ಕೆ ಬಂದು ವಿಚಾರಿಸಿದಾಗ ತಾವು ಕಲ್ಲಡ್ಕ ಸಮೀಪದ ಅಮ್ಟೂರು ಗ್ರಾಮದವರೆಂದೂ ಕಬಕದಿಂದ ನಡೆದುಕೊಂಡು ಬಂದಿರುವುದಾಗಿ ಅಸ್ಪಷ್ಟವಾಗಿ ಹೇಳಿದ್ದಾರೆ.
ಯುವಕ ತನ್ನ ಹೆಸರನ್ನು ಶಶಿಧರ ಪೂಜಾರಿ, ಪತ್ನಿ ಲಲಿತಾ(ಸುಬ್ರಹ್ಮಣ್ಯ ಮೂಲ) ಮತ್ತು ಪುತ್ರನನ್ನು ದಿನೇಶ್ ಎಂದು ಪರಿಚರಿಯಿಸಿದ್ದಾರೆ.
ಯಾಕಾಗಿ ಇಲ್ಲಿಗೆ ಬಂದಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಹಸಿವಿನಿಂದ ತೀವ್ರ ಬಳಲಿದ್ದ ಕಾರಣ ಸ್ಥಳೀಯ ಯುವಕರು ಊಟ, ತಿಂಡಿ ನೀಡಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.
- Advertisement -