Saturday, May 4, 2024
spot_imgspot_img
spot_imgspot_img

ವಿಟ್ಲ: ಶ್ರೀ.ಕ್ಷೇ.ಧ.ಗ್ರಾ.ಯೋ(ರಿ)ವಿಟ್ಲ ಇದರ ಶ್ರೀ ದುರ್ಗಾಂಭಿಕ ಮತ್ತು ಶ್ರೀ ಜಗದಾಂಭಿಕ ಸ್ವಸಹಾಯ ಸಂಘದಿಂದ 2ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ)ವಿಟ್ಲ ಇದರ ಶ್ರೀ ದುರ್ಗಾಂಭಿಕ ಮತ್ತು ಶ್ರೀ ಜಗದಾಂಭಿಕ ಸ್ವಸಹಾಯ ಸಂಘ ಉಕ್ಕುಡ ಆಲಂಗಾರು ಇದರ ಆಶ್ರಯದಲ್ಲಿ 2ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಆಲಂಗಾರು ಮಾಯಿಲಪ್ಪ ಗೌಡ ಇವರ ಮನೆಯಲ್ಲಿ ದಿನಾಂಕ: 21-08-2022ರಂದು ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪದ್ಮಿನಿ ರಾಮ್‌ ಭಟ್‌ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಭಾ ಅಧ್ಯಕ್ಷತೆಯನ್ನು ಶೀನಪ್ಪ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಮೇಲ್ವಿಚಾರಕಿ ಸರಿತಾ, ಉಕ್ಕುಡ ಒಕ್ಕೂಟದ ಅಧ್ಯಕ್ಷರಾದ ದಯಾನಂದ ಮತ್ತು ಸೇವಾಪ್ರತಿನಿಧಿಯಾದ ನಿತ್ಯಾನಂದ, ಶ್ರೀ ದುರ್ಗಾಂಭಿಕ ತಂಡದ ಅಧ್ಯಕ್ಷರಾದ ದಮಯಂತಿ ಮತ್ತು ಶ್ರೀ ಜಗದಾಂಭಿಕ ತಂಡದ ಅಧ್ಯಕ್ಷರಾದ ನಾರಾಯಣ ಉಪಸ್ಥಿತರಿದ್ದರು.

ಪುಟಾಣಿಗಳು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಸಂಭ್ರಮಿಸಿದರು. ತಂಡದ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶ್ರೀ ದುರ್ಗಾಂಭಿಕ ತಂಡದ ವಿದ್ಯಾ ಸ್ವಾಗತಿಸಿ, ಶ್ರೀ ಜಗದಾಂಬಿಕಾ ತಂಡದ ರಘುನಾಥ ಧನ್ಯವಾದವಿತ್ತರು. ಶ್ರೀ ದುರ್ಗಾಂಭಿಕ ತಂಡದ ಲೀಲಾವತಿ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Related news

error: Content is protected !!