Sunday, May 19, 2024
spot_imgspot_img
spot_imgspot_img

ಸುಬ್ರಹ್ಮಣ್ಯ ಹಿಂದು ಯುವತಿಯ ಪ್ರೀತಿಸುವಂತೆ ಒತ್ತಾಯಿಸಿ, ಮಾನಭಂಗಕ್ಕೆ ಯತ್ನಿಸಿದ ಆರೋಪಿಯ ಕೊಲೆಯತ್ನ ಪ್ರಕರಣ; ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ : ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ಬಸ್ ತಂಗುದಾಣದಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಆಪೀದ್ ನನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿ ಜೀಪಿನಲ್ಲಿ ಹಾಕಿ ಕುಮಾರಧಾರ ಜಂಕ್ಷನ್ ಹತ್ತಿರ ಇರುವ ಹಳೆ ಕಟ್ಟಡದ ಕೋಣೆಯೊಳಗೆ ಕೂಡಿಹಾಕಿ ಸುಮಾರು 10 ರಿಂದ 12 ಜನರು ಕೈಯಲ್ಲಿ, ಮರದ ದೊಣ್ಣೆಯಲ್ಲಿ ಮತ್ತು ಬೆತ್ತಗಳಿಂದ ಆರೋಪಿಯ ತಲೆ, ಕೈಕಾಲು, ಭುಜಗಳು, ಬೆನ್ನು ಮತ್ತು ದೇಹದ ಇತರ ಭಾಗಗಳಿಗೆ ಹೊಡೆದು, ಒಂದು ಚಾಕುವಿನಿಂದ ತಿವಿದು ಕೊಲೆಗೆ ಪ್ರಯತ್ನಿಸಿದ ಮತ್ತು ಜೀವ ಬೆದರಿಕೆ ಹಾಕಿದಲ್ಲದೇ, ಆತನ ಮೊಬೈಲ್ ಪರ್ಸ್ ಮತ್ತು ಚೀಲವನ್ನು ಕಸಿದುಕೊಂಡು ಹೋದ ಆರೋಪದಡಿ ಬಂಧಿತರಾದ ರಾಧಾಕೃಷ್ಣ ಮತ್ತು ವಿಶ್ವಾಸ್ ಇವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಕಲಂ 323,324,307,365,143,147,149 ರಂತೆ ಸುಬ್ರಹ್ಮಣ್ಯ ಪೊಲೀಸರ ಪ್ರಕರಣ ದಾಖಲಿಸಿ ದಿನಾಂಕ ಜನವರಿ 6ರಂದು ಬಂಧಿಸಿದ್ದರು.

ಆರೋಪಿಗಳ ಪರವಾಗಿ ವಕೀಲರಾದ ಕಿಶೋರ್ ಕುಮಾರ್ ಮಂಗಳೂರು, ಚಿನ್ಮಯ್ ರೈ ಈಶ್ವರಮಂಗಲ ಮತ್ತು ಹರೀಶ್ ಬೂಡುಪನ್ನೆ ವಾದಿಸಿದರು.

- Advertisement -

Related news

error: Content is protected !!