ವಾರಾಂತ್ಯದ ಕರ್ಫ್ಯೂಗೆ ರಾಜ್ಯದ ಜನತೆ ಸಂಪೂರ್ಣ ಬೆಂಬಲ ಸೂಚಿಸಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳು ಜನರನ್ನು ನಿದ್ದೆಗೆಡಿಸಿದೆ. ಈ ಹಿನ್ನಲೆ ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಹೀಗಾಗಿ ಎರಡನೇ ದಿನವಾದ ಇಂದು ಸಹ ವಿಟ್ಲದ ಜನತೆ ಸರ್ಕಾರದ ನಿಲುವಿಗೆ ಸಾಥ್ ಕೊಟ್ಟಿದೆ.
ಎರಡನೇ ದಿನವಾದ ಇಂದು ವಿಟ್ಲ ಪೇಟೆ ಸ್ತಬ್ಧವಾಗಿದೆ. ಬಿಕೋ ಎನ್ನುತ್ತಿರುವ ರಸ್ತೆಗಳು, ಜನಸಂಚಾರವಿಲ್ಲ, ಅಂಗಡಿ-ಮು0ಗಟ್ಟುಗಳು ಎಲ್ಲವೂ ಮುಚ್ಚಿವೆ. ಬೆಳ್ಳಂಬೆಳಗ್ಗೆಯೇ ಜನರು ರಸ್ತೆಗಿಳಿದು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಉಕ್ಕುಡ, ಮಂಗಳಪದವು, ಕಂಬಳಬೆಟ್ಟು, ಉರಿಮಜಲು, ಹೀಗೆ ಹಲವು ಕಡೆಗಳಲ್ಲಿ ವಾರಂತ್ಯ ಕರ್ಫ್ಯೂಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಸರಿಸುಮಾರು ಹತ್ತರ ವೇಳೆಗೆ ಬಂದ್ ಆಗಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಸರಿಯಾಗಿ ತಪಾಸಣೆ ಮಾಡಿ ರೈಟ್ ಎನ್ನುತ್ತಿದ್ದಾರೆ. ರಸ್ತೆಗಳಲ್ಲಿ ಅವಶ್ಯಕವಾಗಿ ಮಾತ್ರ ಜನರು ತಿರುಗಾಟ ನಡೆಸುತ್ತಿದ್ದಾರೆ. ಎರಡನೇ ದಿನವೂ ಸಹ ಸಂಪೂರ್ಣ ಬೆಂಬಲ ದೊರಕಿರುವುದು ನಿಜಕ್ಕೂ ಶ್ಲಾಘನಾರ್ಯ.