- Advertisement -
- Advertisement -



ಕಡಂಬು: ಎಸ್ಎಲ್ ವಿ ಬುಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಕಾರದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಇದರ ವತಿಯಿಂದ ಕಡಂಬು ದ.ಕ.ಹಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ವಸಂತ ಶೆಟ್ಟಿ ಎರ್ಮಿ ನೆಲೆ, ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಪ್ರಾಂತೀಯ 3ರ ವಲಯ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಉಪಾಧ್ಯಕ್ಷ ಒ.ಎ ಕೃಷ್ಣ, ಮೋಹನ್ ಕಟ್ಟೆ, ಸಕ್ರಿಯ ಸದಸ್ಯರಾದ *ಧರ್ಣಪ ಗೌಡ ಬನ, ಕಾರ್ಯದರ್ಶಿ ಶ್ವೇತ ರವಿ ಕುಮಾರ್ , ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಂ.ಹಸೈನಾರ್ ಹಾಗೂ ಮುಖ್ಯ ಉಪಾಧ್ಯಾಯ ರಾಮಚಂದ್ರ ನಾಯ್ಕ ಬಿ ಮತ್ತು ಇತರ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
- Advertisement -








