Monday, June 30, 2025
spot_imgspot_img
spot_imgspot_img

ಕುಂಡಡ್ಕ: ಬಂಟರ ಸಂಘ ವಿಟ್ಲ ವಲಯದ “ಕೆಸರ್ ಒಂಜಿ ದಿನ” ಕ್ರೀಡಾ ಕೂಟ ಕಾರ್ಯಕ್ರಮ

- Advertisement -
- Advertisement -

ಕುಂಡಡ್ಕ: ಬಂಟರ ಸಂಘ ವಿಟ್ಲ ವಲಯದ “ಕೆಸರ್ ಒಂಜಿ ದಿನ” ಕ್ರೀಡಾ ಕೂಟ ಕಾರ್ಯಕ್ರಮವು ಮರುವಾಳದಲ್ಲಿರುವ “ಕುಂಡಡ್ಕದ ಕುದ್ಕ ಮಜಲಿನಲ್ಲಿ” ನಡೆಯಿತು.

ಕಾರ್ಯಕ್ರಮವನ್ನು ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕುಳ-ಕುಂಡಡ್ಕ ಬಂಟರ ಸಂಘದ ಅಧ್ಯಕ್ಷರು ರಘುರಾಮ ಶೆಟ್ಟಿ ಬರೆ ಮತ್ತು ಭಾಗೀರಥಿ ರಘುರಾಮ ಶೆಟ್ಟಿ ದೀಪ ಬೆಳಗಿಸಿದರು. ಸುಧೀರ್ ಶೆಟ್ಟಿ ಮಿತ್ತೂರು ಕಳಸೆಗೆ ಭತ್ತ ತುಂಬಿಸಿದರು. ಜಯಕರ ಶೆಟ್ಟಿ ಮರುವಾಳ ತೆಂಗಿನ ಹಿಂಗಾರ ಅರಳಿಸಿದರು. ಕುಸುಮಲತ ಅಳಕೆಮಜಲು ಗದ್ದೆಗೆ ಹಾಲು ಎರೆಯುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ವಲಯ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅಪರಾಹ್ನ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಅತಿಥಿಯಾದ ಚಂದ್ರಹಾಸ ಶೆಟ್ಟಿ ಅಧ್ಯಕ್ಷರು ಬಂಟ್ವಾಳ ತಾಲೂಕು ಬಂಟರ ಸಂಘ ಇವರು ಮಾತನಾಡಿ- ಸಂಘದ ಧೈಯೋದ್ದೇಶ ಮತ್ತು ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮತ್ತು ಸಮಾಜದ ಸಮಸ್ತರೊಂದಿಗೆ ಬೆರೆತು ಬದುಕುವ ಅವಶ್ಯಕತೆಯ ಬಗ್ಗೆ ಹೇಳಿದರು. ಇನ್ನೋರ್ವ ಅತಿಥಿ ಸುಧಾಕರ ಶೆಟ್ಟಿ ಬೀಡಿಮಜಲು ಅಧ್ಯಕ್ಷರು ಇಡ್ತಿದು ಸೇವಾ ಸಹಾಕಾರಿ ಸಂಘ ಇವರು, ಬಂಟ ಸಮಾಜವು ಎಲ್ಲಾ ಕಷ್ಟಕ್ಕೂ ನೆರವಾಗುವ ವರ್ಗವಾಗಿದೆ.ಆದ್ದರಿಂದ ಸರ್ವಜಾತಿ ಮತದವರ ಪ್ರೀತಿಗೆ ಮತ್ತು ಗೌರವಕ್ಕೆ ಪಾತ್ರವಾಗಿದೆ ಎಂದರು. ಮಹಿಳಾ ಅತಿಥಿ ಡಾ.ಸುಧಾ ಚಂದ್ರಶೇಖರ ಶೆಟ್ಟಿ ಪ್ರಾಧ್ಯಾಪಕರು ಗೋವಿಂದದಾಸ್ ಕಾಲೇಜು ಸುರತ್ಕಲ್‌ ಇವರು, ಶಿಕ್ಷಣದಿಂದ ಮಾತ್ರ ಸರ್ವರ ಏಳಿಗೆ ಸಾಧ್ಯ, ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಸಮಾಜವನ್ನು ಎತ್ತರಿಸಬೇಕೆಂದರು.

ಸಂಘದ ಗೌರವಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ್ ಶೆಟ್ಟಿ ಕೇಪು ಮತ್ತು ನಮಿತಾ ಜೈನರಕೋಡಿ ನಿರ್ವಹಿಸಿದರು. ಸಾನ್ವಿ ಶೆಟ್ಟಿ ಪಿಲಿಂಜ ಮತ್ತು ಋತ್ವಿಕಾ ರೈ ಅಳಿಕೆಗುತ್ತು ದೇವರ ಪ್ರಾರ್ಥನೆ ಹಾಡಿದರು. ವೇಣುಗೋಪಾಲ ಶೆಟ್ಟಿ ಮರುವಾಳ ಮತ್ತು ಸುಮಂತ್ ಆಳ್ವ ಮರುವಾಳ ಸ್ವಾಗತಿಸಿದರು. ಚಂದ್ರಹಾಸ ಶೆಟ್ಟಿ ಪಿಲಿಂಜ ವಂದನಾರ್ಪನೆಗೈದರು.

ಕಾರ್ಯಕ್ರಮದಲ್ಲಿ ಶಿವಾನಂದ ರೈ ಕೊಲ್ಯ, ಕಾರ್ಯದರ್ಶಿ ವಿಟ್ಲ ವಲಯ ಬಂಟರ ಸಂಘ, ಲತಾ ಸಿ ರೈ ಕೊಲ್ಯ ಅಧ್ಯಕ್ಷರು ಮಹಿಳಾ ವಿಭಾಗ ವಿಟ್ಲ ವಲಯ ಬಂಟರ ಸಂಘ, ರಂಜಿತ್ ಶೆಟ್ಟಿ ಗುಬ್ಬ- ಅಧ್ಯಕ್ಷರು ಯುವ ಬಂಟರ ಸಂಘ ವಿಟ್ಲ ವಲಯ, ಡಿ.ರವೀಂದ್ರ ಶೆಟ್ಟಿ ಕೋಶಾಧಿಕಾರಿ ವಿಟ್ಲ ವಲಯ ಬಂಟರ ಸಂಘ ಬಾಲಕೃಷ್ಣ ಶೆಟ್ಟಿ ಪಡಾರು ಸಂಚಾಲಕರು ಸಾಂಸ್ಕೃತಿಕ ವಿಭಾಗ ವಿಟ್ಲ ವಲಯ ಬಂಟರ ಸಂಘ ಮತ್ತು ಎಲ್ಲಾ ಗ್ರಾಮ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಮಾಜಭಾಂದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!