- Advertisement -
- Advertisement -
ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆಯನ್ನು ದೇಣಿಗೆಯಾಗಿ ನೀಡದಂತೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ರಾಮಮಂದಿರ ದೇಗುಲ ನಿರ್ಮಾಣಕ್ಕಾಗಿ ಇದುವರೆಗೂ ಭಕ್ತಾದಿಗಳು 400 ಕೆ.ಜಿ.ಯಷ್ಟು ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆ ರೂಪದಲ್ಲಿ ಬಂದಿದೆ.
ಅವುಗಳನ್ನು ಇಡಲು ಬ್ಯಾಂಕ್ ಲಾಕರ್ಗಳಲ್ಲಿ ಜಾಗವಿಲ್ಲ, ಹೀಗಾಗಿ, ಬೆಳ್ಳಿ ಇಟ್ಟಿಗೆಗಳನ್ನು ಕಳುಹಿಸಬೇಡಿ ಎಂದು ಟ್ರಸ್ಟ್ ಕೋರಿದೆ.
ದೇಣಿಗೆಯ ರೂಪದಲ್ಲಿ ಈವರೆಗೆ ರಾಮಮಂದಿರ ನಿರ್ಮಾಣಕ್ಕಾಗಿ 1,600 ಕೋಟಿ ರೂ.ಗಳಷ್ಟು ಹಣ ಸಂಗ್ರಹವಾಗಿದೆ. ದೇಶಾದ್ಯಂತ 1.5 ಲಕ್ಷ ಗುಂಪುಗಳು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪರವಾಗಿ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದು, ಮುಂದಿನ 39 ತಿಂಗಳಲ್ಲಿ ಮಂದಿರ ಕಾರ್ಯವನ್ನು ಪೂರ್ಣಗೊಳಿಸುವ ಗುರಿಯಿದೆ.
- Advertisement -