Thursday, April 25, 2024
spot_imgspot_img
spot_imgspot_img

ಬೆಳ್ತಂಗಡಿ: ದಲಿತ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ‌ನಡೆಸಿ ಬರ್ಬರ ಕೊಲೆ

- Advertisement -G L Acharya panikkar
- Advertisement -
vtv vitla

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ದಲಿತ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ‌ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಶಿಬಾಜೆ ಗ್ರಾಮದ ಎಸಿ ಕುರಿಯನ್ ಮಾಲೀಕತ್ವದ ಸಾರ ಫಾರ್ಮ್‌ನಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲ್ಲಲಾಗಿದೆ.

ತೋಟದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಮೃತ ದುರ್ದೈವಿ. ಈತನ ಮೇಲೆ ಶನಿವಾರ ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದಾದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮತ್ತೆ ಭೀಕರ ಹಲ್ಲೆ ನಡೆಸಿ ಭಾನುವಾರ ಕೊಲೆ ಮಾಡಲಾಗಿದೆ. ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ.ಆನಂದ ಪೂಜಾರಿ, ಮಹೇಶ್ ಪೂಜಾರಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಇದಕ್ಕೂ ಮೊದಲು ಹಲ್ಲೆ ನಡೆದಾಗ ತೋಟದ ಸಿಬ್ಬಂದಿ ಅಬ್ರಾಹಂ ಮತ್ತು ಪರಮೇಶ್ವರ್, ಶ್ರೀಧರ್‌ನ ರಕ್ಷಣೆ ಮಾಡಿದ್ದರು. ಭಾನುವಾರ ಬೆಳಗ್ಗೆ ಕೊಠಡಿ ಬಳಿ ಬಂದು ನೋಡಿದಾಗ ಶ್ರೀಧರ್ ನಾಪತ್ತೆಯಾಗಿದ್ದ. ಹೀಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದಾಗ ತೋಟದ ರೂಮ್‌ನ ಸುಮಾರು 300 ಮೀಟರ್ ದೂರದಲ್ಲಿ ಶ್ರೀಧರ್ ಮೃತದೇಹ ಪತ್ತೆಯಾಗಿದೆ.

ನಾಲ್ವರು ಆರೋಪಿಗಳು ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿ ತುಂಡರಿಸಿ ಬಂದು ಶ್ರೀಧರನ ಕೊಲೆ ಮಾಡಿ, ಆತನ ಬಳಿ ಇದ್ದ ಬಳಿ ಇದ್ದ 9500 ರೂ.ಗಳನ್ನು ದೋಚಿ ಪರಾರಿಯಾಗಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ 323, 302, 392 ಜತೆಗೆ 34 IPC ಮತ್ತು ಕಲಂ 3(2) (va),3(2)(v) ಎಸ್ಟಿ /ಎಸ್ಸಿ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!