- Advertisement -
- Advertisement -
ನವದೆಹಲಿ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ದೆಹಲಿಯ ಗುರುದ್ವಾರದ ರಕಬ್ ಗಂಜ್ ಕೋವಿಡ್ ಕೇರ್ ಸೆಂಟರ್ಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಜೀಂದರ್ ಸಿಂಗ್ ಸಿರ್ಸಾ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸೆಂಟರ್ ಇಂದು ಉದ್ಘಾಟನೆ ಆಗಲಿದ್ದು 400 ಹಾಸಿಗಳ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ 300 ಹಾಸಿಗಳ ವ್ಯವಸ್ಥೆಯನ್ನು ಅಮಿತಾಬ್ ಬಚ್ಚನ್ ಮಾಡಿರುವುದು ವಿಶೇಷ.
ಇನ್ನು ಕೋವಿಡ್ ಕೇರ್ ಸೆಂಟರ್ಗೆ ವಿದೇಶದಿಂದ ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಪೂರೈಕೆಯಾಗುವಂತೆ ಕೂಡ ಅಮಿತಾಬ್ ಬಚ್ಚನ್ ನೋಡಿಕೊಂಡಿದ್ದಾರೆ ಎಂದು ಸಿರ್ಸಾ ತಿಳಿಸಿದ್ದಾರೆ.
- Advertisement -