- Advertisement -
- Advertisement -






ಬ್ರಹ್ಮಾವರ: ಮನೆಯಿಂದ ಸ್ಕೂಟರ್ನಲ್ಲಿ ಹೋದ ವ್ಯಕ್ತಿ ವಾಪಾಸ್ಸು ಬಾರದೇ ನಾಪತ್ತೆಯಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಉಳ್ಳೂರು ಗ್ರಾಮದ ಅಣ್ಣಯ್ಯ ನಾಯ್ಕ ಎಂಬವರ ಮಗ ಸಂದೀಪ್ ಎ.(37) ಎಂದು ಗುರುತಿಸಲಾಗಿದೆ.
ಡಿ.20ರಂದು ಬೆಳಗ್ಗೆ ಸಂದೀಪ್ ಎಂಬವರು ಕಚೇರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಸ್ಕೂಟರ್ನಲ್ಲಿ ಹೋದವರು ಈವರೆಗೆ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








