Saturday, April 27, 2024
spot_imgspot_img
spot_imgspot_img

ಸಿಎಂ ಬಿಎಸ್ವೈ ಮಂಡಿಸಿರುವ ರಾಜ್ಯ ಬಜೆಟ್ ಹೈಲೈಟ್ಸ್

- Advertisement -G L Acharya panikkar
- Advertisement -

ಬೆಂಗಳೂರು: ಏರುತ್ತಲೇ ಇರುವ ಪೆಟ್ರೋಲ್ ಬೆಲೆ, ಉದ್ಯೋಗ ಕಡಿತ, ಕರೋನಾ ಸಂಕಷ್ಟದ ನಡುವೆ ಸಿಎಂ ಬಿಎಸ್ವೈ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸ್ವತಃ ಹಣಕಾಸು ಸಚಿವರು ಆಗಿರುವ ಸಿಎಂ ಬಿಎಸ್ವೈ ಮಂಡಿಸಿರುವ ಬಜೆಟ್ ನ ಹೈಲೈಟ್ಸ್ ಇಲ್ಲಿದೆ.

  • ಉದ್ಯೋಗ ಸೃಷ್ಟಿಗಾಗಿ ಹಾಗೂ ಮಹಿಳೆಯರು ಮಕ್ಕಳ ಬಲವರ್ಧನೆಗಾಗಿ ಬೆಂಗಳೂರಿನ ಸುತ್ತಮುತ್ತ ಇರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರವಾಗಿ ಉನ್ನತೀಕರಿಸುವುದು.
  • ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಗೆ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರ
  • ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಿಸಲು ಸುಧಾರಣಾ ಆಯೋಗ
  • ಮನೆಬಾಗಿಲಿಗೆ ಮಾಸಾಶನ ಅಭಿಯಾನ ಆರಂಭ
  • 58 ಆಣೆಕಟ್ಟುಗಳ ಪುನಶ್ಚೇತನ ಹಾಗೂ ಅಭಿವೃದ್ಧಿಗಾಗಿ ಅನುದಾನ
  • ಉತ್ತರ ಕನ್ನಡ ಜಿಲ್ಲೆ ಹಾಗೂ ಕರಾವಳಿಯಲ್ಲಿ ಖಾರ್ ಲ್ಯಾಂಡ್ ಅಭಿವೃದ್ಧಿ ಯೋಜನೆ
  • ಸಣ್ಣ ಉದ್ಯಮ ನಡೆಸುವ ಮಹಿಳೆಯರಿಗೆ ಸುರಕ್ಷತೆ, ಬ್ರ್ಯಾಡಿಂಗ್ ಸೇರಿದಂತೆ ಅಗತ್ಯ ತಾಂತ್ರಿಕ ನೆರವು
  • ಪೆಟ್ರೋಲ್-ಡಿಸೇಲ್ ಮೇಲಿನ ಕೆಎಸ್ಟಿ ಯಥಾಸ್ಥಿತಿ ಮುಂದುವರಿಕೆ.
  • ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ರಿಯಾಯತಿ ದರದಲ್ಲಿ ಪಾಸ್ ವಿತರಿಸಲು 30 ಕೋಟಿ ಮೀಸಲು
  • ಬೆಂಗಳೂರಿನ ಹೆಸರಘಟ್ಟದಲ್ಲಿ ಥೀಮ್ಸ್ ಪಾರ್ಕ್ ನಿರ್ಮಾಣ
  • ತುಮಕೂರಿನ ಸಿದ್ಧಗಂಗಾಶ್ರೀಗಳ ಪ್ರತಿಮೆ ನಿರ್ಮಾಣ ಹಾಗೂ ವಸ್ತುಪ್ರದರ್ಶನಾಲಯಕ್ಕೆ 2 ಕೋಟಿ ನೆರವು
  • ಕೊಪ್ಪಳದಲ್ಲಿ ಸಂವರ್ಧನಾ ಕೇಂದ್ರ ನಿರ್ಮಾಣ
  • ನೂತನ ಜಿಲ್ಲೆ ವಿಜಯನಗರಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ವಿಶೇಷ ಆದ್ಯತೆ
  • ರಾಜ್ಯದ ಆಸ್ಪತ್ರೆಗಳಲ್ಲಿ ಜ್ಯೋತಿ ಸಂಜೀವಿನಿ ಯೋಜನೆಯಡಿ ಅಗತ್ಯ ತುರ್ತು ಉಚಿತ ಶಸ್ತ್ರಚಿಕಿತ್ಸೆಗೆ ಅವಕಾಶ.
- Advertisement -

Related news

error: Content is protected !!