- Advertisement -
- Advertisement -
ವಿಟ್ಲ: ಪೊಲೀಸ್ ಉಪನಿರೀಕ್ಷಕ ವಿನೋದ್ ರೆಡ್ಡಿ ಅವರ ತಂಡ ಗಸ್ತುವಿನಲ್ಲಿದ್ದಾಗ ಕನ್ಯಾನ ಪೇಟೆಯ ಶಿರಂಕಲ್ಲು ಕ್ರಾಸ್ ಬಳಿಯ ಬೇಕರಿಯ ಹಿಂಭಾಗದಲ್ಲಿ ಬೊಬ್ಬೆ ಹೊಡೆಯುವುದನ್ನು ಗಮನಿಸಿ ಸ್ಥಳಕ್ಕೆ ತೆರಳಿದಾಗ ಕೈಯಲ್ಲಿ ಮೂವರು ಪ್ಯಾಕೇಟ್ ಹಿಡಿದು ಕುಳಿತಿದ್ದವರನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಇಬ್ಬರು ತಪ್ಪಿಸಿಕೊಂಡಿದ್ದು, ಕನ್ಯಾನ ಒಡಿಯೂರು ನಿವಾಸಿ ಅಬ್ದುಲ್ ಅಮ್ರಾಜ್ ಯಾನೆ ಅಂಬು (೨೦) ವಶಕ್ಕೆ ಪಡೆದುಕೊಂಡಿದ್ದಾರೆ.
ಈತನನ್ನು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಮಾಡುತ್ತ ಇತರರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾನೆ.
ಆತನ ಬಳಿಯಿಂದ ಸುಮಾರು ೧೮೦ ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈತ ಕೆಲವು ಸಮಯದ ಹಿಂದೆ ಸಾಲೆತ್ತೂರು ಹಾಗೂ ಆನೆಕಲ್ಲು ಕರ್ನಾಟಕ ಕೇರಳ ಭಾಗದಲ್ಲಿ ಗಲಭೆ ಸೃಷ್ಠಿಸುವ ಕಾರ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.
- Advertisement -