Wednesday, August 5, 2026
spot_imgspot_img
spot_imgspot_img

ಕಾಸರಗೋಡು : ಅಡುಗೆ ಮಾಡುವ ವೇಳೆ ಬೆಂಕಿ ತಗುಲಿ ಅಡುಗೆ ಸಿಬ್ಬಂದಿ ಸಾವು!

- Advertisement -
- Advertisement -

ಕಾಸರಗೋಡು: ಬಂಗ್ರ ಮಂಜೇಶ್ವರ ಸರಕಾರಿ ಹೈಸ್ಕೂಲಿನ ಅಡುಗೆ ನೌಕರೆ ಉದ್ಯಾವರ ಮಾಡ ನಿವಾಸಿ ಜಯ(56) ಸಾವನ್ನಪ್ಪಿದ್ದಾರೆ. ಶಾಲೆಯಲ್ಲಿ ಮಧ್ಯಾಹ್ನದ ಊಟದ ಅಡುಗೆ ಮಾಡುವ ವೇಳೆ ಸ್ಟವ್ ನಿಂದ ಬೆಂಕಿ ತಗುಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಶಾಲಾ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಬೆಂಕಿ ತಗುಲಿದ್ದು, ಇವರ ಬೊಬ್ಬೆ ಕೇಳಿ ಅಧ್ಯಾಪಕರು ಧಾವಿಸಿ ಬಂದು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಇವರ ದುರ್ಮರಣ ಶಾಲೆ ಮತ್ತು ಊರವರನ್ನು ಗಾಢ ದುಖಃಕ್ಕೆ ತಳ್ಳಿದೆ.

- Advertisement -

Related news

error: Content is protected !!