ವಿಟ್ಲ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕೊಳ್ನಾಡು ಗ್ರಾಮ ಸಮಿತಿ ಮತ್ತು ಮಂಕುಡೆ ಘಟಸಮಿತಿ ಇದರ ವತಿಯಿಂದ ದ.ಕ.ಜಿ.ಪ.ಉ.ಪ್ರಾ. ಶಾಲೆ ಮಂಕುಡೆ ಇದರ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರಮದಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀಧರ್ ಪೂಂಜ, ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಆಚಾರ್ಯ ಮಂಕುಡೆ, ಶ್ರೀ ಮಹಮ್ಮಾಯೀ ಭಜನಾ ಮಂಡಳಿ, ನಾಗವನ – ಕುಂಟ್ರಕಲ ಇದರ ಪ್ರಮುಖರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಹಳೆ ವಿದ್ಯಾರ್ಥಿ ಯುವಕ ಮಂಡಲ ಮಂಕುಡೆ ಇದರ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಂಕುಡೆ ಪ್ರಭಾರ ಮುಖ್ಯ ಶಿಕ್ಷಕ ಇಂದುಶೇಖರ ಮತ್ತು ಶಿಕ್ಷಕರ ವೃಂದ, ಘಟಸಮಿತಿಯ ಉಪಾಧ್ಯಕ್ಷ ಜಗನ್ನಾಥ್ ಶೆಟ್ಟಿ, ಕಾರ್ಯದರ್ಶಿ ಉಮೇಶ್ ನಾಯ್ಕ್, ಜೊತೆ ಕಾರ್ಯದರ್ಶಿ ಪ್ರೇಮ ಯಸ್. ಪೂಂಜ, ಹಾಗೂ ಸಂಘಟನಾ ಕಾರ್ಯದರ್ಶಿಯಾದ ಶ್ರಾವ್ಯ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಮ ವಿಕಾಸ ಯೋಜನೆಯ ಸಂಯೋಜಕರಾದ ಲೀಲಾ ಕೆ., ಸೇವಾ ದೀಕ್ಷಿತರಾದ ಶ್ವೇತಾ ಶೆಟ್ಟಿ ಮತ್ತು ಕುಮಾರಿ ಅರ್ಪಿತ ಸಹಕರಿಸಿದರು. ವಿಕಾಸವಾಹಿನಿಯ ಸುಮಾರು 55 ಸದಸ್ಯರು ಈ ಶ್ರಮ ಸೇವೆಯಲ್ಲಿ ಭಾಗವಹಿಸಿದರು. ಶಾಂತಿ ಮಂತ್ರದಿಂದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.