- Advertisement -
- Advertisement -



ದೈವಜ್ಞ ರತ್ನ ಬ್ರಹ್ಮಶ್ರೀ ವಳಕುಂಜ ವೆಂಕಟರಮಣ ಭಟ್ಟರ ಹಾಗೂ ದೈವಜ್ಞ ಡಾ| ಬ್ರಹ್ಮಶ್ರೀ ವಳಕ್ಕುಂಜ ಮುರಳೀ ಕೃಷ್ಣ ಭಟ್ಟರ ನೇತೃತ್ವದಲ್ಲಿ ಮೇ. ತಿಂಗಳಿನಲ್ಲಿ ಪ್ರಾರಂಭವಾದ ಅಷ್ಟ ಮಂಗಲ ಪ್ರಶ್ನೆಯ ಮುಂದುವರಿದ ಪ್ರಶ್ನಾ ಚಿಂತನೆಯು ಜುಲೈ 28 ರಿಂದ ಆಗಸ್ಟ್ 1 ರ ವರೆಗೆ ವೀರಕಂಭ ಗ್ರಾಮದ ಮಡಿವಾಳಕೋಡಿ ತೀರ್ಥಕೆಲಿಂಜದಲ್ಲಿ ನಡೆಯಲಿದೆ.ಆ ಪ್ರಯುಕ್ತ ತೀರ್ಥ ಕೆಲಿಂಜದ ಪುಣ್ಯ ಮಣ್ಣಿನಲ್ಲಿ ನಡೆಯಲಿರುವ ಅಷ್ಟಮಂಗಲ ಪ್ರಶ್ನ ಚಿಂತನೆ ಧರ್ಮಸಭೆಯಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀ ದೈವಗಳು ಕೃಪೆಗೆ ಪಾತ್ರರಾಗಬೇಕಾಗಿ ಗ್ರಾಮಸ್ಥರು ಹಾಗೂ ಹತ್ತು ಸಮಸ್ತರು ಹಾಗೂ ದೇಯಿ ಪೊಂಜೆ ಯಾನೆ ದೇವಂಜೆ ವಂಶಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








