ವಿಟ್ಲ: ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯೆ ಶೋಭಾ ಪಿ. ರೈ ರವರ 1.17ಲಕ್ಷ ರೂಪಾಯಿ ಅನುದಾನದಲ್ಲಿ ವಿಟ್ಲಪಡ್ನೂರು ಗ್ರಾಮದ ಗ್ರಾಮಚಾವಡಿ ಎಂಬಲ್ಲಿ ನಿರ್ಮಾಣವಾಗಲಿರುವ ನೂತನ ಬಸ್ಸು ನಿಲ್ದಾಣದ ಕಟ್ಟಡಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ರವರು ಶಿಲನ್ಯಾಸ ನೆರವೇರಿಸಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿ, ಕೊಳ್ನಾಡು ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ನಿಕಟಪೂರ್ವ ಗ್ರಾ.ಪಂ ಸದಸ್ಯರುಗಳಾದ ಅಬ್ದುಲ್ ರಹಿಮಾನ್ ಕಡಂಬು, ಸಿದ್ದಿಕ್ ಸರವು, ಶರೀಫ್ ಕೊಡಂಗೆ, ಬೂತ್ ಅಧ್ಯಕ್ಷರುಗಳಾದ ಅಬೂಬಕರ್ ಪರ್ತಿಪ್ಪಾಡಿ, ತಮ್ಮಯ್ಯ ಗೌಡ ಪೂರ್ಲುಪಾಡಿ, ಹರೀಶ್ ಗೌಡ ಬನ ,ವಲಯ ಕಿಸನ್ ಘಟಕ ಅಧ್ಯಕ್ಷರಾದ ಪ್ರಕಾಶ್ ರೈ,
ವಲಯ ಕಾಂಗ್ರೆಸ್ ಮುಖಂಡರುಗಳಾದ ಅಬೂಬಕ್ಕರ್ ಕೊಡಂಗಾಯಿ, ಶೀನಾ ಸಪಲ್ಯ ಗಾಣದ ಮನೆ, ಹೇಮನಾಥ ಆಳ್ವ, ನವೀನ್ ಗೌಡ, ಇಬ್ರಾಹಿಂ ಕಡಂಬು, ಸುಲೈಮಾನ್ ಕೊಡಂಗಾಯಿ, ರಾಮ್ ಪ್ರಕಾಶ್ ಪಡಾರು, ಗೋಪಾಲ ಪಡಾರು ಮೊದಲಾದವರು ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ರಾದ ಬಿ. ಸಂದೇಶ್ ಶೆಟ್ಟಿ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.