ವಿಟ್ಲ: ಸಾಯಿ ಟೌನ್ ಕಿಚನ್ ಹೋಟೆಲ್ ಐದನೇ ವರ್ಷದ ಪದಾರ್ಪಣೆಯ ಹಿನ್ನಲೆ ಹೋಟೆಲ್ ಮಾಲಕ ದಿವಾಕರ್ ಶೆಟ್ಟಿ ಅಬೀರಿ ಇವರ ನೇತೃತ್ವದಲ್ಲಿ ವಿಟ್ಲ ಪಟ್ಟಣ ಪಂಚಾಯತ್ನ ಪೌರ ಕಾರ್ಮಿಕರಿಗೆ ಮತ್ತು ಹೋಂಗಾರ್ಡ್ ಸಿಬ್ಬಂದಿಗಳಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಸಾಯಿ ಟೌನ್ ಕಿಚನ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್, ಪೌರ ರಕ್ಷಣ ಪಡೆಯ ಮಖ್ಯಸ್ಧರು ಹಾಗೂ ಮುಖ್ಯಮಂತ್ರಿಯವರಿಂದ ಚಿನ್ನದ ಪದಕ ಪಡೆದ ಡಾ. ಮುರಳಿ ಮೋಹನ್ ಚುಂತಾರು, ರೋಟರಿ ಕ್ಲಬ್ ವಿಟ್ಲ ಘಟಕದ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ,
ರೋಟರಿ ಕ್ಲಬ್ನ ಸ್ಥಾಪಕಾಧ್ಯಕ್ಷ ಭಾಸ್ಕರ್ ಶೆಟ್ಟಿ, ಹೋಟೆಲ್ ಮಾಲಕರ ಸಂಘ ವಿಟ್ಲ ಇದರ ಅಧ್ಯಕ್ಷ ಗಿರಿಯಪ್ಪ ಪೂಜಾರಿ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ರೋಟರಿ ಕ್ಲಬ್ ವಿಟ್ಲ ಇದರ ಕಾರ್ಯದರ್ಶಿ ಸೋಮಶೇಖರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ: ಒಡಿಯೂರು ಸಂಸ್ಥಾನದಲ್ಲಿ ಆಟಿದ ಆಯನೋ ಕಾರ್ಯಕ್ರಮಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಚಾಲನೆ
ಕಾರ್ಯಕ್ರಮದ ನಿರೂಪಣೆ ವಿಠ್ಠಲ ಪೂಜಾರಿ ಅತಿಕಾರ ಬೈಲು, ಸ್ವಾಗತ ಸುಶಾಂತ್ ಸಾಲಿಯಾನ್ ಚಂದಳಿಕೆ, ಪದ್ಮನಾಭ ಶೆಟ್ಟಿ ಚಾಪುಡಿಯಡ್ಕ ಧನ್ಯವಾದಗೈದರು.