Sunday, May 5, 2024
spot_imgspot_img
spot_imgspot_img

ವಿಟ್ಲ:(ಎ.12) ಆರ್‍.ಕೆ.ಕಲಾ ಸಂಸ್ಥೆಗಳು (ರಿ.), ವಿಟ್ಲ ಇವರಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಹಬ್ಬ

- Advertisement -G L Acharya panikkar
- Advertisement -

ವಿಟ್ಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಟ ನಿರ್ದೇಶನದ ಆರ್‍.ಕೆ.ಕಲಾ ಸಂಸ್ಥೆಗಳು(ರಿ.),ವಿಟ್ಲ ಇವರಿಂದ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಹಬ್ಬ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಎ.12 ಬೆಳಿಗ್ಗೆ 8:30ಕ್ಕೆ ಬಂಗಾರು ಅರಸರು ವಿಟ್ಲ ಅರಮನೆ ಉದ್ಘಾಟಿಸಲಿದ್ದು ಪಂಚಲಿಂಗೇಶ್ವರ ಸದನ ವಿಟ್ಲ ಇಲ್ಲಿ ನಡೆಯಲಿದೆ.

ನಾಡಿನ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಚಿತ್ರಕಲೆ, ಕ್ರಾಪ್ಟ್, ಜಾದು, ಗ್ರಾಮೀಣ ಕ್ರೀಡೆ, ಕ್ಲೇಮಾಡ್ಲಿಂಗ್ , ಕುಣಿತ ಭಜನೆ, ಮುಖವರ್ಣಿಕೆ, ಯೋಗ, ರಂಗ ತರಬೇತಿ, ವ್ಯಕ್ತಿ ವಿಕಸನ ತರಬೇತಿ ಎಲ್ಲಾ ರೀತಿಯ ನೃತ್ಯ ಪ್ರಕಾರಗಳು , ಶೈಕ್ಷಣಿಕ ಪ್ರವಾಸ ಹಾಗೂ ಇತರ ವಿಷಯಗಳ ತರಬೇತಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಡ್ರಾಮಾ ಜೂನಿಯರ್ ಸೀಸನ್ ಐದರ ಸ್ಪರ್ಧೆ ರಿಷಿ ತ್ ರಾಜ್ ಹಾಗೂ ಡ್ರಾಮಾ ಜೂನಿಯರ್ಸ್ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಗ್ರಾಮೀಣ ಪ್ರತಿಭೆಗಳೆಲ್ಲರೂ ಈ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕಾಗಿ ತಮ್ಮ ಮಕ್ಕಳ ಪ್ರತಿಭೆಗಳನ್ನು ಹೊರ ತೆಗೆಯುವಲ್ಲಿ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರ ಇರಲಿ ಎಂದು, ರಾಜೇಶ್ ವಿಟ್ಲ ತಿಳಿಸಿದರು

ಆಡಳಿತ ಮುಕ್ತೇಶ್ವರರು, ಶ್ರೀ ಪಂಚಲಿಂಗೇರ್ಶರ ದೇವಸ್ಥಾನ ವಿಟ್ಲ, ಶ್ರೀ ಅಯ್ಯಪ್ಪ ದೇವಸ್ಥಾನ ವಿಟ್ಲ, ಯುವ ವಾಹಿನಿ ವಿಟ್ಲ ಘಟಕ , ಬಿಲ್ಲವ ಸಂಘ(ರಿ.) ವಿಟ್ಲ, ಜೆ.ಸಿ ವಿಟ್ಲ ಶ್ರೀ ದೇವಿ ಶಾಮಿಯಾನ ವಿಟ್ಲ, ಸರಕಾರಿ ಪ್ರೌಢಶಾಲೆ (RMSA) ವಿಟ್ಲ, ಯುವ ಕೇಸರಿ ಅಭೀರಿ, ಲಯನ್ಸ್ ಕ್ಲಬ್ ವಿಟ್ಲ, ರವಿವರ್ಮ ಸೌಂಡ್ಸ್ ವಿಟ್ಲ ಸಂಸ್ಥೆಗಳು ಸಹಕಾರ ನೀಡಲಿದೆ.

- Advertisement -

Related news

error: Content is protected !!